ಕಾಸರಗೋಡು ಸಂಸತ್ ಸದಸ್ಯ ರಾಜಮೋಹನ್ ಉಣ್ಣಿತಾನ್ ಉಪವಾಸ ಸತ್ಯಾಗ್ರಹ…

ಕಾಸರಗೋಡು: ಸಂಸತ್ ಸದಸ್ಯ ರಾಜಮೋಹನ್ ಉಣ್ಣಿತಾನ್ ಅವರು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆ ಮತ್ತು ಜನವಿರೋಧಿ ನೀತಿಯ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ನಡೆಸುತ್ತಿರುವ 24 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಕಾಸರಗೋಡು ಜಿಲ್ಲಾ ಕಾಂಗ್ರೇಸ್ ಪರಿಸರದಲ್ಲಿ ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಎಂ ಪಿ ಉದ್ಘಾಟಿಸಿದರು. ಜಬಿ ಮಾತರ್ ಎಂ ಪಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಉಪಸ್ಥಿತರಿದ್ದರು.

12 ಗಂಟೆ ಪೂರೈಸಿದ ಉಪವಾಸ ಸತ್ಯಾಗ್ರಹದ ಕಾರ್ಯಕ್ರಮದ ಪ್ರಯುಕ್ತ ನಿನ್ನೆ ರಾತ್ರಿ 9 ಘಂಟೆಗೆ ನಡೆದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್, ಎರಡು ಬಾರಿ ಗಾಂಧಿ ಪುರಸ್ಕಾರ ವಿಜೇತ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಸುಳ್ಯ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ ಭಾಗವಹಿಸಿದರು. ಈ ಸಂದರ್ಭದಲ್ಲಿ ಉದುಮ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಎ ಐ ಸಿ ಸಿ ಸದಸ್ಯ ಬಾಲಕೃಷ್ಣನ್ ಪೆರಿಯ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷರಾದ ಕರಣ್ ತಾಪ, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳಾದ ಜೇಮ್ಸ್ ಡಿ ಸೋಜಾ,ಸುರೇಶ ವಿ ಪಿ, ಉಪಸ್ಥಿತರಿದ್ದರು.

whatsapp image 2023 09 10 at 7.50.29 am
Sponsors

Related Articles

Back to top button