ಬಿಜೆಪಿಗೆ ಓಟು ಹಾಕಿದರೆ ಕೊರೋನಾ ಲಸಿಕೆ ಎಂಬುದು ಅವಿವೇಕತನದ ಹೇಳಿಕೆ – ಎಂ.ವೆಂಕಪ್ಪ ಗೌಡ…

ಸುಳ್ಯ: ಇನ್ನೂ ಕಂಡು ಹಿಡಿಯದ ಕೊರೊನ ಲಸಿಕೆಯನ್ನು ಬಿಜೆಪಿಗೆ ಓಟು ಹಾಕಿದರೆ ನೀಡುತ್ತೇವೆ ಎಂದು ಬಿಜೆಪಿಗರು ಹೇಳುತ್ತಿರುವುದನ್ನು ನಂಬಲು ಜನರೇನು ಅಪ್ರಬುದ್ಧರೇ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.
ಇವತ್ತಿಗೆ ನಮ್ಮ ದೇಶದಲ್ಲಿ 79 ಲಕ್ಷ ಕೋವಿಡ್ ಸೋಂಕಿತರಿದ್ದಾರೆ 1.18 ಲಕ್ಷ ಜನ ಕೊವಿಡ್ ನಿಂದ ಸಾವನ್ನಪ್ಪಿದ್ದಾರೆ .ರಾಜ್ಯದಲ್ಲಿ 8 ಲಕ್ಷ ಜನ ಸೋಂಕಿತರಿದ್ದಾರೆ, ಸಾವಿನ ಸಂಖ್ಯೆ 11 ಸಾವಿರಕ್ಕೆ ಏರಿದೆ. ಜಲಪ್ರಳಯದಲ್ಲಿ ಮನೆ ಮಠ ಕಳೆದುಕೊಂಡವರು, ಸತ್ತವರ ಸಂಖ್ಯೆಗೆ ಲೆಕ್ಕವೇ ಇಲ್ಲ ! ಉದ್ಯೋಗ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದವರ ಲೆಕ್ಕ ಸಿಗುವುದೇ ಇಲ್ಲ ! ಅರ್ಥಿಕ ಕುಸಿತದಿಂದ ನೊಂದವರ ಪಾಡನ್ನು ಕೇಳುವವರೇ ಇಲ್ಲ ! ಗಡಿಭಾಗದಲ್ಲಿ ಸತ್ತ ಸೈನಿಕರ ಜೀವಕ್ಕೆ ಬೆಲೆಯೇ ಇಲ್ಲ !. ಬಿಜೆಪಿ ಓಟು ಕೇಳೋದಾದರೆ ಇಂಥವರ ಜೀವ ಉಳಿಸಿ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿ ಚುನಾವಣೆಯಲ್ಲಿ ಓಟು ಕೇಳಬೇಕು. ಹೊರತು ಇನ್ನೂ ಕಂಡು ಹಿಡಿಯದ ಕೊರೊನ ಲಸಿಕೆಯನ್ನು ಬಿಜೆಪಿಗೆ ಓಟು ಹಾಕಿದರೆ ನೀಡುತ್ತೇವೆ ಎನ್ನುತ್ತಿರುವುದು ಈ ಹಿಂದೆ ಪ್ರತಿಯೊಬ್ಬನ ಖಾತೆಗೆ ಸ್ವಿಸ್ ಬ್ಯಾಂಕ್ ನಿಂದ ತಂದು ರೂ.15 ಲಕ್ಷ ಹಣ ತುಂಬುತ್ತೇವೆ ಎಂದು ಸುಳ್ಳು ಹೇಳಿದಂತೆ. ಇಂತಾ ಸುಳ್ಳು ಹೇಳುವ ಬಿಜೆಪಿಗರು ಎಷ್ಟು ಅವಿವೇಕಿಗಳೆಂದು ತಿಳಿಯದಷ್ಟು ಜನ ಅಪ್ರಬುದ್ಧರಾಗಿದ್ದಾರೆಯೇ ಎಂದೂ ವೆಂಕಪ್ಪ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button