ಸಜಿಪನಡು ಶಿವಶಂಕರ ಸುಬ್ರಹ್ಮಣ್ಯ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವ- ದ್ವಿತೀಯ ದಿನದ ಧರ್ಮಸಭೆ…

ಬಂಟ್ವಾಳ: ಸಜಿಪನಡು ಶಿವಶಂಕರ ಸುಬ್ರಹ್ಮಣ್ಯ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವದ ದ್ವಿತೀಯ ದಿನದ ಧರ್ಮಸಭೆ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಎಂ ಭಂಡಾರಿ ಪುಣ್ಕೆ ಮಜಲು ಅಧ್ಯಕ್ಷತೆ ಯಲ್ಲಿ ಜರಗಿತ್ತು.
ಕಕ್ಕುಂಜೆ ಶ್ರೀ ನಾಗಾನಂದ ವಾಸುದೇವಾಚಾರ್ಯ, ಕಸೆಕೊಡಿ ಸೂರ್ಯನಾರಾಯಣ ಭಟ್, ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು ಜಾಗತಿಕ ಬಂಟರ ಸಂಘ ಗಳ ಒಕ್ಕೂಟ, ಕರ್ನಿರೆ ವಿಶ್ವನಾಥ ಶೆಟ್ಟಿ ಉಪಾಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮುಂಡ್ಕೂರು ರತ್ನಾಕರ ಶೆಟ್ಟಿ ಕಾರ್ಯಾಧ್ಯಕ್ಷರು ಮಾತೃಭೂಮಿ ಸಹಕಾರಿ ಸಂಘ ಮುಂಬೈ, ಜೀವನ್ ಕೆ. ಶೆಟ್ಟಿ ಆಡಳಿತ ನಿರ್ದೇಶಕ ಇನ್ಫ್ರಾ ಡಿಸೈನ್ ಮೂಲ್ಕಿ ಕಾರ್ನಾಡು, ಸತೀಶ್ ಶೆಟ್ಟಿ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಯಸಂಕರ ಬಾಸ್ರಿತಾಯ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಮುಗಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಎಂ ಕೃಷ್ಣ ಶಾಮ್ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಶ್ರೀ ಮಂಜಲ್ ಪಾದೆ ವಿಷ್ಣುಮೂರ್ತಿ ದೇವಸ್ಥಾನ ಸಜೀಪಮುನ್ನೂರು, ಉಲ್ಲಾಸ್ ರೈ ಸೂರಿಕುಮೆರು ಉದ್ಯಮಿ, ಐತಪ್ಪ ಆಳ್ವ ಸುಜಿರು ಗುತ್ತು ಪದ್ಮ ಸರ್ವಿಸಸ್ ಬಿಸಿರೋಡು, ಸಿ. ಎ. ಯತೀಶ್ ಭಂಡಾರಿ ಲೆಕ್ಕ ಪರಿಸೋದಕರು ಬಿಸಿರೋಡ್, ವೇಣುಗೋಪಾಲ್ ಶೆಟ್ಟಿ ಅಧ್ಯಕ್ಷರು ಠಾಣೆ ಬಂಟರ ಸಂಘ ಮೊದಲಾದವರು ಉಪಸ್ಥಿತರಿದ್ದರು. ಅಶೋಕ ಪಕ್ಕಳ ವಾಮದಪದವು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್ ಧನ್ಯವಾದ ನೀಡಿದರು.

Sponsors

Related Articles

Back to top button