ಡಾ.ಅಮೀರ್ ತುಂಬೆ ನಿಧನ ಟಿ. ಎಂ. ಶಾಹಿದ್ ತೆಕ್ಕಿಲ್ ಸಂತಾಪ…

ಸುಳ್ಯ: ಕಾಂಗ್ರೆಸ್ ಮುಖಂಡರೂ, ಇಂಟಕ್ ರಾಜ್ಯ ಉಪಾಧ್ಯಕ್ಷರೂ, ಮುಸ್ಲಿಂ ಜಸ್ಟಿಸ್ ಫೋರಂ ನ ಸ್ಥಾಪಕರಾದ ಡಾ.ಅಮೀರ್ ತುಂಬೆ ಅವರ ನಿಧನದಿಂದಾಗಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಕಾಂಗ್ರೆಸ್ ಮುಖಂಡ, ಕೆ. ಪಿ. ಸಿ. ಸಿ. ಯ ಮಾಜಿ ಕಾರ್ಯದರ್ಶಿ ಟಿ. ಎಂ. ಶಾಹಿದ್ ತೆಕ್ಕಿಲ್ ಅವರು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿರುತ್ತಾರೆ.

ಮೃತರ ಮನೆಗೆ ಭೇಟಿ ಕೊಟ್ಟ ಅವರು ನಂತರ ಒಳವೂರಿನ ಜುಮ್ಮಾ ಮಸೀದಿಯಲ್ಲಿ ನಡೆದ ದಫನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ, ಮಿಥುನ್ ರೈ ಅವರೊಂದಿಗೆ ಟಿ .ಎಂ.ಶಾಹಿದ್ ಭಾಗವಹಿಸಿದರು.

 

Sponsors

Related Articles

Back to top button