ಏಪ್ರಿಲ್ 14ರ ವರೆಗೆ ‘ಮದ್ಯದಂಗಡಿ’ ಬಂದ್…

ಬೆಂಗಳೂರು: ಏ.14 ರವರೆಗೆ ರಾಜ್ಯಾದ್ಯಂತ ಮದ್ಯದಂಗಡಿಗಳನ್ನೂ ಬಂದ್‌ ಮಾಡಲು ರಾಜ್ಯ ಸರಕಾರ ಆದೇಶ ಮಾಡಿದೆ.
ಕೊರಾನ ವೈರಸ್‌ ಅನ್ನು ಮಟ್ಟಹಾಕುವ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮಗಳನ್ನು ರಾಜ್ಯ ಸರಕಾರ ತೆಗೆದುಕೊಳ್ಳುತ್ತಿದ್ದು, ಅದರ ಇನ್ನೊಂದು ಭಾಗವಾಗಿ ಈಗ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಏಪ್ರಿಲ್‌ 14ರ ವರಗೆ ಬಂದ್‌ ಮಾಡಲು ಆದೇಶ ಮಾಡಲಾಗಿದೆ.
ಮದ್ಯ ಸಿಗದೇ ಈಗಾಗಲೇ ಧಾರವಾಡ, ಭಾಲ್ಕಿ, ಉಡುಪಿ, ಮತ್ತು ತುಮಕೂರಿನಿಂದ ನಾಲ್ಕು ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಬಂದಿತ್ತು, ಇದೀಗ ಮತ್ತೆ ಐವರು ಸೇರ್ಪಡೆಯಾಗಿದ್ದಾರೆ.ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮೂವರು, ಕುಂದಾಪುರ ಮತ್ತು ಉಡುಪಿ ತಾಲೂಕಿನ ಇಬ್ಬರು ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button