ನಳಂದಾ ವಿಶ್ವವಿದ್ಯಾಲಯ ಮಾದರಿಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಅಶೋಕೆ ಯಲ್ಲಿ – ಈಶ್ವರಕುಮಾರ್ ಭಟ್….

ಸುಳ್ಯ: ನಳಂದಾ ವಿ ವಿ ಮಾದರಿಯವಿದ್ಯಾಪೀಠ ವಿಷ್ಣುಗುಪ್ತ ವಿದ್ಯಾಪೀಠ ಗೋಕರ್ಣದ ಅಶೋಕೆ ಯಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಹವ್ಯಕ ವಲಯ ಸುಳ್ಯದ ಅಧ್ಯಕ್ಷರಾದ ಈಶ್ವರಕುಮಾರ್ ಭಟ್ ತಿಳಿಸಿದರು.
ಅವರು ಜ.15 ರಂದು ಸುಳ್ಯ ವಲಯ ಚೆನ್ನಕೇಶವ ಘಟಕದ ಗುರಿಕ್ಕಾರರಾದ ಪ್ರೋ. ಟಿ ಶ್ರೀಕೃಷ್ಣ ಭಟ್ ರವರ ಮನೆಯಲ್ಲಿ ನಡೆದ ಗುರುವಂದನೆ ಹಾಗೂ ಘಟಕ ಸಭೆಯಲ್ಲಿ ವಿವಿವಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ವಲಯ ಕಾರ್ಯದರ್ಶಿ ವಿಷ್ಣುಕಿರಣ್ ಘಟಕ ಸಭೆ ಮತ್ತು ಗುರುವಂದನೆ ಬಗ್ಗೆ ಪ್ರಾಸ್ತಾವಿಕವಾಗಿ ವಾತನಾಡಿದರು. ವಿವಿವಿ ನಿರ್ದೇಶಕರು ಮತ್ತು ಘಟಕ ಗುರಿಕ್ಕಾರರಾದ ಪ್ರೋ. ಟಿ ಶ್ರೀಕೃಷ್ಣ ಭಟ್ ರಾಮಚಂದ್ರಾಪುರ ಮಠದ ಯೋಜನೆಗಳ ಬಗ್ಗೆ ತಿಳಿಸಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಗುರುವಂದನೆಯೊಂದಿಗೆ ಪ್ರಾರಂಭಗೊಂಡ ಸಭೆ ಶಾಂತಿ ಮಂತ್ರದಿಂದ ಮುಕ್ತಾಯವಾಯಿತು.

Sponsors

Related Articles

Leave a Reply

Your email address will not be published. Required fields are marked *

Back to top button