ಸುಳ್ಯ ಇನ್ನರ್ ವೀಲ್ ಹಾಗೂ ಶಿಶು ಕಲ್ಯಾಣ ಇಲಾಖೆಯಿಂದ ಮಾಹಿತಿ ಶಿಬಿರ…

ಸುಳ್ಯ: ಗಾಂಧಿನಗರ ಅಂಗನವಾಡಿಯಲ್ಲಿ ಸುಳ್ಯ ಇನ್ನರ್ ವೀಲ್ ಹಾಗೂ ಶಿಶು ಕಲ್ಯಾಣ ಇಲಾಖೆಯ ವತಿಯಿಂದ ಕಿಶೋರಿಯರಿಗೆ ಮಾಹಿತಿ ಶಿಬಿರ ಮತ್ತು ಇನ್ನರ್ ವೀಲ್ ಕ್ಲಬ್ ನಿಂದ ನೀಡಿದ ಕಪಾಟು ಕೊಡುಗೆಯ ಹಸ್ತಾಂತರ ಕಾರ್ಯಕ್ರಮ ಜರಗಿತು.
ಶಿಶು ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ರಶ್ಮಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಜಯಮಣಿ ಮಾಧವ ಅಧ್ಯಕ್ಷತೆ ವಹಿಸಿದ್ದರು.
ಡಾ| ವೀಣಾ ಫಾಲಚಂದ್ರ ಕಿಶೋರಿಯರಿಗೆ ಆರೋಗ್ಯ ಮಾಹಿತಿ ನೀಡಿದರು. ವೇದಿಕೆಯಲ್ಲಿ ಅಂಗನವಾಡಿ ಶಿಕ್ಷಕಿ ಶೋಭಾ , ಅಂಗನವಾಡಿ ಸಮಿತಿಯ ಕುಶಾಲಪ್ಪ ಗೌಡ, ಜೆ.ಕೆ ರೈ, ಶಶಿಕಲಾ ಹರಪ್ರಸಾದ್, ಪೂಜಾ ಸಂತೋಷ್,ವಿನುತಾ ಶೇಟ್, ಜಯಲಕ್ಷ್ಮಿ ಜೆ.ಕೆ ರೈ, ಗೀತಾ, ಹರ್ಷಿತಾ ಮತ್ತಿತರರಿದ್ದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಜಯಮಣಿ ಮಾಧವ ಸ್ವಾಗತಿಸಿದರು. ಯೋಗಿತಾ ಗೋಪಿನಾಥ್ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ಶೋಭಾ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button