ಸೌಜನ್ಯ ಅತ್ಯಾಚಾರ, ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಸಾರ್ವಜನಿಕವಾಗಿ ನೇಣಿಗೇರಿಸಲು ಆಗ್ರಹ. ..

ಸುಳ್ಯ: ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 11 ವರುಷಗಳ ಹಿಂದೆ ಮನುಷ್ಯಕುಲ ತಲೆತಗ್ಗಿಸುವಂತಹ ಪೈಶಾಚಿಕ ಕೃತ್ಯವು ಜರುಗಿದ್ದು, ಅದನ್ನು ಅಂದಿನ ಸರಕಾರವು ಸಿಬಿಐ ತನಿಖೆಗೆ ವಹಿಸಿ ಇದೀಗ ನ್ಯಾಯಾಲಯವು ಸಂತೋಷ್ ರಾವ್ ರನ್ನು ನಿರಾಪರಾಧಿ ಎಂದು ಹೇಳಿದ್ದು, ಹಾಗಿದ್ದರೆ ಈ ಪ್ರಕರಣದ ಆರೋಪಿ ಯಾರೆಂಬುವುದನ್ನು ಸರಕಾರ ಪತ್ತೆಹಚ್ಚಬೇಕು ಹಾಗೆಯೇ ಈ ಪೈಶಾಚಿಕ ಕೃತ್ಯವೆಸಗಿದವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು. ಅಲ್ಲದೇ ಸೌಜನ್ಯಳ ತಾಯಿಗೆ ಆದ ನೋವು ಇನ್ನುಮುಂದೆ ಯಾವ ತಾಯಿಗೂ ಬರಬಾರದು ಎಂದು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಆಗ್ರಹಿಸಿದ್ದಾರೆ.
ಅಲ್ಲದೇ ಅಗಸ್ಟ್ 8 ರಂದು ನಡೆಯುವ ಸೌಜನ್ಯ ಪರ ಹೋರಾಟದಲ್ಲಿ ಸುಳ್ಯ ನಗರದ ಎಲ್ಲಾ ಸಾರ್ವಜನಿಕರು ಪಕ್ಷ ಜಾತಿ ಮತಭೇದ ಮರೆತು ಭಾಗವಹಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Back to top button