ಶ್ರೀ ಅಲ್ಲಮಪ್ರಭು ಚಲನಚಿತ್ರ- ಆಯ್ದಕ್ಕಿ ಮಾರಯ್ಯನಾಗಿ ಕೆ.ವಿ ರಮಣ್…

12 ನೇ ಶತಮಾನದ ಇತಿಹಾಸವುಳ್ಳ ಶ್ರೀ ಅಲ್ಲಮಪ್ರಭು ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಈ ಚಿತ್ರದಲ್ಲಿ ಆಯ್ದಕ್ಕಿ ಮಾರಯ್ಯನಾಗಿ ಕೆ.ವಿ ರಮಣ್ ನಟಿಸಿದ್ದಾರೆ.
ಡಾ.ಸಂಜಯ್ ಮತ್ತು ಅಂಕಿತ ಶಿವ-ಪಾರ್ವತಿಯಾಗಿ ಅಭಿನಯಿಸಿದ ವಿಭಿನ್ನವಾದ ಹಾಡನ್ನು ಚಿತ್ರೀಕರಣದ ಕೊನೆಯ ಭಾಗವಾಗಿ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಯಿತು. ಚಿತ್ರವು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವುದಾಗಿ ನಿರ್ಮಾಪಕರಲ್ಲೊಬ್ಬರಾದ ಮಾಧವಾನಂದ ವೈ ತಿಳಿಸಿದ್ದಾರೆ. ಇವರಿಗೆ ಮಹಾವೀರ ಪ್ರಭು ನಿರ್ಮಾಣದಲ್ಲಿ ಜೊತೆಗೂಡಿದ್ದಾರೆ.
ಈ ಚಿತ್ರವನ್ನು ಶರಣ್ ಗದ್ವಾಲ್ ನಿರ್ದೇಶನ ಮಾಡುತ್ತಿದ್ದು , ಆರ್. ಗಿರಿ ಛಾಯಾಗ್ರಾಹಕರಾಗಿದ್ದಾರೆ. ಕುಮಾರ್ ಈಶ್ವರ್ ಸಂಗೀತ, ಬಿ.ಎಸ್. ಕೆಂಪರಾಜ್ ಸಂಕಲನ,ರಮೇಶ್ ಬಾಬು ವರ್ಣಾಲಂಕಾರ , ಬೆಳ್ಳಿ ಚುಕ್ಕಿ ವೀರೇಂದ್ರ ವಸ್ತ್ರಾಲಂಕಾರ ಚಿತ್ರಕ್ಕಿದ್ದು, ಕಥೆ- ಚಿತ್ರಕಥೆಯನ್ನು ಮಾಧವಾನಂದ ವೈ ರಚಿಸಿದ್ದಾರೆ.
ಸಚಿನ್ ಸುವರ್ಣ, ನೀನಾಸಂ ಅಶ್ವಥ್ , ರಮೇಶ್ ಪಂಡಿತ್, ಗಣೇಶ್ ರಾವ್ ಕೇಸರ್ಕರ್, ಕೆ.ವಿ ರಮಣ್ ,ನಾರಾಯಣಸ್ವಾಮಿ, ವಿಕ್ರಂ ಸೂರಿ, ರಘು ಭಟ್, ಯತಿರಾಜ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ಭಾಸ್ಕರ್, ಕಾವೇರಿ ಶ್ರೀಧರ್, ಶಿವಕುಮಾರ್ ಆರಾಧ್ಯ, ಡಾ. ಚಿಕ್ಕಹೆಜ್ಜಾಜಿ ಮಹದೇವ್ , ಸುರೇಶರಾಜ್, ಸಂದೀಪ್ ಮಲಾನಿ, ಗುಬ್ಬಿ ನಟರಾಜ್, ಅವಿನಾಶ್ ಪಾಟೀಲ್, ರಾಧಾಕೃಷ್ಣ ರಾವ್, ರಾಜ್ ಉದಯ್, ಸಂಭ್ರಮಶ್ರೀ, ಅಮೃತವರ್ಷಿಣಿ ಸೇರಿದಂತೆ ಬಹುತಾರಾಗಣ ಚಿತ್ರದಲ್ಲಿದೆ.

Sponsors

Related Articles

Back to top button