ಮಾ.26,27 ಸುಳ್ಯ ರಂಗಮನೆಯಲ್ಲಿ ರಂಗಗೀತೆ ಗಾಯನ ಕಾರ್ಯಾಗಾರ -ವಿಶ್ವ ರಂಗಭೂಮಿ ದಿನಾಚರಣೆ…

ಸುಳ್ಯ: ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಮಾರ್ಚ್ 26 ಮತ್ತು 27 ರಂದು
ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ರಂಗಗೀತೆ ಗಾಯನ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಈ ಶಿಬಿರವನ್ನು ನೀನಾಸಂ ಪದವೀಧರ ಮತ್ತು ಸಂಗೀತ ನಿರ್ದೇಶಕರಾದ ಮೈಸೂರಿನ ಚಂದ್ರಶೇಖರ ಹೆಗ್ಗೊಠ್ಠಾರ ನಡೆಸಿಕೊಡಲಿದ್ದಾರೆ.
ಪೌರಾಣಿಕ,ಐತಿಹಾಸಿಕ ಮತ್ತು ಆಧುನಿಕ ರಂಗನಾಟಕಗಳ ಹಾಡುಗಳನ್ನು ಈ ಶಿಬಿರದಲ್ಲಿ ತರಬೇತಿ ನೀಡಲಾಗುವುದು.
ಶೃತಿ-ತಾಳ-ಲಯ ಜ್ಞಾನವಿರುವ 30 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು ಆಸಕ್ತರು 9448215946 ಇದಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಶಿಬಿರದಲ್ಲಿ ಕಲಿತ ಹಾಡನ್ನು ಮಾ.27 ರಂದು ಸಂಜೆ ನಡೆಯುವ ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಹಾಡಲಿರುವುದೆಂದು ರಂಗಮನೆಯ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Sponsors

Related Articles

Back to top button