ಶ್ರೀರಾಮ ಪದವಿ ಕಾಲೇಜಿಗೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಭೇಟಿ…

ಬಂಟ್ವಾಳ : ಪ್ರಕೃತಿಯೊಂದಿಗಿನ ಶಿಕ್ಷಣವು ಮಾತ್ರ ಮಾನವನನ್ನು ಸಹಜತೆಯತ್ತ ಕೊಂಡೊಯ್ಯಬಲ್ಲದು. ಅಂತಹ ಶಿಕ್ಷಣ ಇಲ್ಲಿ ಸಿಗುತ್ತಿದ್ದು ವ್ಯಕ್ತಿ ನಿರ್ಮಾಣದ ನಿಜವಾದ ಕೇಂದ್ರ ಶ್ರೀರಾಮ ವಿದ್ಯಾಕೇಂದ್ರ ಎಂದು ಬೆಂಗಳೂರು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ.
ಶ್ರೀರಾಮ ಪದವಿ ಕಾಲೇಜಿಗೆ ಭೇಟಿ ನೀಡಿ ಮಾತನಾಡಿದ ಅವರು, 3 ಬಾರಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸಿ ವಿಧಾನ ಪರಿಷತ್‍ನ ಸದಸ್ಯನಾಗಿ ಸುಮಾರು ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿದ್ದೇನೆ. ಆದರೆ ಇಲ್ಲಿ ನೀಡಲಾಗುವ ನೆಲ, ಜಲ, ಪರಿಸರದೊಂದಿಗೆ ಸಂಸ್ಕಾರವನ್ನು ಬೆಸೆಯುವ ಸಂಬಂಧವನ್ನು ಎಲ್ಲೂ ನೋಡಿಲ್ಲ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಇದರ ಮಾಜಿ ಕುಲಪತಿ ಡಾ ಶಿವಲಿಂಗಯ್ಯ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ, ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button