ನಳಿನ್ ಕುಮಾರ್ ಗೆ ಮಂಗಳೂರು ಬಿಟ್ರೆ ಮತ್ತೇನೂ ಗೊತ್ತಿಲ್ಲ – ಸಿದ್ಧರಾಮಯ್ಯ ಕುಹಕ….

ಮಂಗಳೂರು: ನಳಿನ್ ಕುಮಾರ್ ಗೆ ರಾಜ್ಯದಲ್ಲಿ ಜಿಲ್ಲೆಗಳೆಷ್ಟಿವೆ ಅಂತಲೇ ಗೊತ್ತಿಲ್ಲ. ಅವರಿಗೆ ಪಾಪ ಮಂಗಳೂರು ಬಿಟ್ರೆ ಮತ್ತೇನೂ ಗೊತ್ತಿಲ್ಲ, ಅದರಿಂದ ಹಾಗೆ ಹೇಳಿದ್ದಾರೆ.ಅವರ ಜ್ಞಾನ ಅಷ್ಟೇ ಇರುವಾಗ ಇನ್ನೇನು ಮಾಡಕ್ಕಾಗುತ್ತೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮಂಜೇಶ್ವರ ಚುನಾವಣಾ ಪ್ರಚಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲೆಂದು ಅ. 18 ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಸರ್ಕಾರದಲ್ಲಿ ಹೇಳೋರಿಲ್ಲ ಕೇಳೋರಿಲ್ಲ, ನಿಜ ಹೇಳಬೇಕಾದ್ರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ವರ್ಗಾವಣೆ ದಂಧೆ ಬಿಟ್ಟರೆ, ಆಡಳಿತದಲ್ಲಿ ಯಾವುದೇ ‌ ಕೆಲಸ ನಡೆಯುತ್ತಿಲ್ಲ. ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿದ್ದರೂ ಸಂತ್ರಸ್ತರಿಗೆ ಸೂಕ್ತ ಪರಿಹಾರದ ನೀಡುವ ಕೆಲಸ ಆಗುತ್ತಿಲ್ಲ. ಐಟಿ-ಇಡಿ ಬಿಟ್ಟು ಬೆದರಿಸೋದು, ಹಾಗೂ ಅಪರೇಷನ್ ಕಮಲ ನಡೆಸೋದು ಬಿಟ್ಟರೆ ಬಿಜೆಪಿಗರಿಗೆ ಬೇರೇನೂ ಗೊತ್ತಿಲ್ಲ” ಎಂದೂ ಅವರು ಹೇಳಿದರು.

Sponsors

Related Articles

Leave a Reply

Your email address will not be published. Required fields are marked *

Back to top button