ಬಂಟ್ವಾಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸನ್ಮಾನ ಕಾರ್ಯಕ್ರಮ….

ಬಂಟ್ವಾಳ:ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸೆ 12 ರಂದು ಬಿ.ಸಿ.ರೋಡಿನ ಗೀತಾಂಜಿಲಿ ಕಲ್ಯಾಣ ಮಂಟಪದಲ್ಲಿ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರಾದ ಸಜಿಪಪಡು ಗ್ರಾಮದ ಜಾರಪ್ಪ ಶೆಟ್ಟಿ , ಅಜ್ಜಿಬೆಟ್ಟು ಗ್ರಾಮದ ಗಂಗಾಧರ, ನಾವೂರು ಗ್ರಾಮದ ಜಯಂತಿ ಇವರನ್ನು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಸನ್ಮಾನಿಸಿ ಅಭಿನಂದಿಸಿದರು.
ಉಪಾಧ್ಯಕ್ಷ ಕೆ.ಸಂಜೀವ ಪೂಜಾರಿ , ನಿರ್ದೇಶಕರಾದ ಚಂದ್ರಪಕಾಶ್ ಶೆಟ್ಟಿ ,ಹೊನ್ನಪ್ಪ ನಾಯ್ಕ , ಮುರಳೀಧರ ಶೆಟ್ಟಿ, ಚಂದ್ರಹಾಸ ಕರ್ಕೇರ, ಪರಮೇಶ್ವರ ಎಮ್, ಚಂದ್ರಶೇಖರ ಶೆಟ್ಟಿ , ಶಿವಪ್ಪ ಪೂಜಾರಿ, ಸುಜಾತ ರೈ , ಪುಷ್ಪಾವತಿ , ವ್ಯವಸ್ಥಾಪಕ ಶೇಖರ್ ಎಮ್. ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button