ಮಂಗಳೂರಿನಿಂದ ಸುರತ್ಕಲ್‌ವರೆಗಿನ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಸೆ.16ರಂದು ಪಾದಯಾತ್ರೆ….

ಮಂಗಳೂರು : ಮಂಗಳೂರಿನಿಂದ ಸುರತ್ಕಲ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ಇದನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ನೇತೃತ್ವದಲ್ಲಿ ಬೃಹತ್‌ ಪಾದಯಾತ್ರೆ ಸೆ.16ರಂದು ಸಂಜೆ 4 ಗಂಟೆಗೆ ಕುಳಾಯಿಯಿಂದ ಬೈಕಂಪಾಡಿವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಮೊಹಿಯುದ್ದೀನ್‌ ಬಾವ ಅವರು ಪಾದಯಾತ್ರೆ ಬಳಿಕ ಬೈಕಂಪಾಡಿಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗುವುದು. ನಂತರ ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ರಸ್ತೆ ಸರಿ ಇಲ್ಲದಿದ್ದರೂ ಸುರತ್ಕಲ್‌ ಮತ್ತು ಹೆಜಮಾಡಿಯಲ್ಲಿ ಟೋಲ್‌ ಸಂಗ್ರಹಿಸುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಮಳೆಗಾಲದಲ್ಲೇ ದುರಸ್ತಿ ನಡೆದಿತ್ತು. ಆದರೆ ಈ ಬಾರಿ ಪರಿಸ್ಥಿತಿ ತೀರ ಹದಗೆಟ್ಟರೂ ಕೇಳುವವರಿಲ್ಲವಾಗಿದೆ ಎಂದರು.
ಕಾಂಗ್ರೆಸ್‌ ಮುಖಂಡರಾದ ಪ್ರತಿಭಾ ಕುಳಾಯಿ,ಖಾಲಿದ್‌ ಉಜಿರೆ, ನಝೀರ್‌ ಬಜಾಲ್‌, ಸದಾಶಿವ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button