ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಕುoಞಪ್ಪಳ್ಳಿ ಯವರಿಗೆ ಸನ್ಮಾನ…

ಸುಳ್ಯ: ದ. ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಸುಳ್ಯದ ಪ್ರಥಮ ನೋಟರಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಕುoಞಪ್ಪಳ್ಳಿ ಯವರನ್ನು ಸನ್ಮಾನಿಸಲಾಯಿತು.
ಸೆಂಟ್ರಲ್ ಕಮಿಟಿ ಅಧ್ಯಕ್ಷ, ಮಾಜಿ ಮುಖ್ಯಸಚೇತಕ ಕೆ. ಎಸ್. ಮಹಮ್ಮದ್ ಮಸೂದ್ ಮಾತನಾಡಿ ಕುoಞಪ್ಪಳ್ಳಿ ಯವರ ಸಾಮಾಜಿಕ, ರಾಜಕೀಯ ಜೀವನ ಇಂದಿನ ಪೀಳಿಗೆಗೆ ಮಾದರಿ ಎಂದರು,ಐದು ದಶಕಗಳ ಒಡನಾಟವನ್ನು ಸ್ಮರಿಸಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಕೊಡಿಚ್ಚಾಲ್ ಇಬ್ರಾಹಿಂ ಹಾಜಿ, ಹನೀಫ ಹಾಜಿ,ಸಂಘಟನಾ ಕಾರ್ಯದರ್ಶಿ ಸಂಶುದ್ದೀನ್ ಜಾವಗಲ್ ದರ್ಗಾ ಶರೀಫ್ ಆಡಳಿತ ಟ್ರಸ್ಟಿ ಹಾಜಿ ಇಸಾಕ್ ಸಾಹೇಬ್ ಪಾಜಪ್ಪಳ್ಳ,ಕೆಪಿಸಿಸಿ ಮಾಧ್ಯಮ ವಕ್ತಾರ ಟಿ. ಎಂ. ಶಹೀದ್. ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ,ನಿವೃತ್ತ ಉಪ ಕಾರ್ಯದರ್ಶಿ ಇಬ್ರಾಹಿಂ ಗೂನಡ್ಕ, ಕೆ. ಬಿ. ಇಬ್ರಾಹಿಂ ಬಶೀರ್ ಸಪ್ನ,ಕೆಪೆಕ್ ನಿಗಮದ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button