ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ – ಅಶ್ವತ್ಥ ವೃಕ್ಷದ ನೂತನ ಕಟ್ಟೆಯ ನಿರ್ಮಾಣಕ್ಕೆ ಶಿಲಾನ್ಯಾಸ…

ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪಮುನ್ನೂರು ಇಲ್ಲಿ ನೇತ್ರಾವತಿ ನದಿ ತಟದಲ್ಲಿ ಅಶ್ವತ್ಥ ವೃಕ್ಷದ ನೂತನ ಕಟ್ಟೆಯ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಇಂದು ನೆರವೇರಿಸಿದರು.
ಧಾರ್ಮಿಕ ವಿಧಿ-ವಿಧಾನಗಳನ್ನು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವಿದ್ಯುಕ್ತವಾಗಿ ನೆರವೇರಿಸಿದರು. ಸ್ಕ್ಯಾಡ್ಸ್ ಅಧ್ಯಕ್ಷ ಕೆ ರವೀಂದ್ರ ಕಂಬಳಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಎಮ್ ಕೃಷ್ಣ ಶಾಮ್ ಅರ್ಚಕ ಕೃಷ್ಣ ಭಟ್, ವಿಶ್ವಾಸ್, ಭಾಸ್ಕರ ಬಾಸ್ರಿತ್ತಾಯ, ಹರಿಪ್ರಸಾದ್ ಭಂಡಾರಿ, ಎನ್ ಕೆ ಶಿವ, ದೇವಪ್ಪ ಮಡಿವಾಳ, ಧನಂಜಯ ಶೆಟ್ಟಿ, ರಾಜು ಪೂಜಾರಿ, ವಿನೋದ್ ನಾಯಕ್, ದೀಕ್ಷಿತ್ ಶೆಟ್ಟಿ, ವಿಶ್ವನಾಥ, ಪದ್ಮನಾಭ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button