ಮಂಗಳೂರಿನ ಸಹ್ಯಾದ್ರಿ ಕಾಲೇಜ್ ನಲ್ಲಿ ಯುಜಿ ವಿದ್ಯಾರ್ಥಿ ಪರಿಷತ್ ಸದಸ್ಯರುಗಳಿಗೆ ಒಂದು ದಿನದ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಕ್ರಮ…..

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ವಿಭಾಗವು ಸೆಪ್ಟೆಂಬರ್ 20 ರಂದು ಒಂದು ದಿನದ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಕ್ರಮನ್ನು ಆಯೋಜಿಸುತ್ತಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ 28 ಕಾಲೇಜುಗಳ ಒಟ್ಟು 220 ಯುಜಿ ವಿದ್ಯಾರ್ಥಿ ಪರಿಷತ್ ಸದಸ್ಯರು ಕಾರ್ಯಕ್ರಮಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ.
ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ವಿ ಮಾಲಿನಿ ಮುಖ್ಯ ಅತಿಥಿಯಾಗಿ, ಸ್ಯಾಂಡಲ್ ವುಡ್ ಮತ್ತು ಕೋಸ್ಟಲ್ ವುಡ್ ನಟ ಶ್ರೀ ಪೃಥ್ವಿ ವಿ ಅಂಬರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಲೇಜ್ ಪ್ರೊಫೆಸರ್ ಗಳಾದ – ಡಾ. ವಿಶಾಲ್ ಸಮರ್ಥಾ, ಡಾ. ಶರಣ್ ಕುಮಾರ್ ಶೆಟ್ಟಿ, ಪ್ರೊ. ರಮೇಶ್ ಕೆ ಜಿ ಮತ್ತು ಪ್ರೊ. ಸಮಾರ್ಥ್ ಶೆಣೈ ಅವರುಗಳು ತರಬೇತಿ ಕಾರ್ಯಕ್ರಮ ನಡೆಸಿಕೊಡುವರು. ಭಾಗವಹಿಸುವ ಸದಸ್ಯರು ಸಹ್ಯಾದ್ರಿ ಕ್ಯಾಂಪಸ್ನೊಳಗಿನ ಕಂಪನಿಗಳಿಗೆ ಭೇಟಿ ನೀಡಿ ಕೈಗಾರಿಕಾ ಮುಖ್ಯಸ್ಥರೊಂದಿಗೆ ಸಂವಹನ ನಡೆಸಲಿದ್ದಾರೆ. ಕಾರ್ಯಕ್ರಮವನ್ನು ಪ್ರೊ. ಸುಶ್ಮಾ ವಿ ಮತ್ತು ಪ್ರೊ. ಮೋನಿಶಾ ಶೆಟ್ಟಿ ಸಂಯೋಜಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button