ಕೊರೋನಾ ಲಸಿಕೆ: ತಮ್ಮ ತಪ್ಪನ್ನು ಮುಚ್ಚಲು ಬಿಜೆಪಿ ನಾಯಕರಿಂದ ಕಾಂಗ್ರೆಸ್ ವಿರುದ್ಧ ಅಪಪ್ರಚಾರ- ವೆಂಕಪ್ಪ ಗೌಡ…

ಸುಳ್ಯ:ಕೊರೋನಾ ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿದೆ, ಆ ಕಾರಣಕ್ಕೆ ಕೊರೋನಾ ಸೋಂಕಿತರ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ಈ ಮೂಲಕ ಬಿಜೆಪಿ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಾಸ್ತವ ಸಂಗತಿ ಏನೆಂಬುದನ್ನು ಜನ ತಿಳಿದುಕೊಳ್ಳಬೇಕಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ನ. ಪಂ. ಸದಸ್ಯ ಎಂ. ವೆಂಕಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ದೇಶದಲ್ಲಿ ಲಸಿಕೆ ತಯಾರು ಮಾಡುವ ಒಂದೆರಡು ಕಂಪೆನಿಗಳನ್ನೇ ನಂಬಿಕೊಂಡು ಬಿಡಲಾಯಿತು. ಅಷ್ಟಕ್ಕೂ ಲಸಿಕೆ ಪ್ರಯೋಗ ಹಂತದಲ್ಲಿ ಇರುವಾಗಲೇ ಬಿಜೆಪಿ ಲಸಿಕೆಯನ್ನು ಮುಂದಿಟ್ಟುಕೊಂಡು ಮೋದಿಯವರನ್ನು ಬಿಲ್ಡ್ ಅಪ್ ಮಾಡುವರೇ ಹೊರಟಿರುವ ಸಂದರ್ಭದಲ್ಲಿ ಲಸಿಕೆಯ ಎಲ್ಲಾ ಹಂತದ ಪ್ರಯೊಗ ಪೂರೈಸದೆ ಉಪಯೋಗಿಸುವುದು ಎಷ್ಟು ಸೂಕ್ತ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಅದರೆ ಅದರ ಆರ್ಥ ಬಿಜೆಪಿ ಯವರು ಹೇಳಿದಂತೆ ಕಾಂಗ್ರೆಸ್ ಅಪಪ್ರಚಾರ ಮಾಡಿದ್ದು ಅಲ್ಲ .ಇದಕ್ಕೆ ಪೂರಕ ಎಂಬಂತೆ ಜಗತ್ತಿನಲ್ಲಿ ಈಗ 12 ಲಸಿಕಾ ಕಂಪೆನಿಗಳಿವೆ .ಅವೆಲ್ಲವೂ ನಮ್ಮ ದೇಶಕ್ಕೆ ಲಸಿಕೆ ಒದಗಿಸಲು ಗ್ಲೋಬಲ್ ಟೆಂಡರ್ ನ್ನ ಈಗಷ್ಟೇ ಕರೆಯಲಾಗಿದೆ . ಇದನ್ನೇ ಅಂದೇ ಕರೆಯಬಹುದಿತ್ತಲ್ಲಾ?. ನಮ್ಮ ರಾಜ್ಯದಲ್ಲಿ ಅಕ್ಸಿಜನ್ ದೊರೆಯದೆ , ಬೆಡ್ ದೊರೆಯದೆ ಅದೆಷ್ಟು ಜನ ಸತ್ತರು ? ಇದನ್ನ ಕಾಂಗ್ರೆಸ್ ಪಕ್ಷ ಮತ್ತು ಮಾಧ್ಯಮಗಳು ಸಮರ್ಥವಾಗಿ ಮಂಡನೆ ಮಾಡಿದ್ದವು. ಇದರಿಂದ ರಾಜ್ಯದ ಸಾವಿರಾರು ಜನರ ಪ್ರಾಣ ಉಳಿಯಿತು . ಇದನ್ನೇ ನ್ಯಾಯಾಲಯಗಳು ಹೇಳಬೇಕಾದ ಪರಿಸ್ಥಿತಿ ಕೂಡಾ ಬಂದೊದಗಿತ್ತು . ಹಾಗಾಗಿ ಸರಕಾರ ಕೋರ್ಟ್ ಗಳಿಂದ ಛೀಮಾರಿ ಹಾಕಿಸಿಕೊಂಡಿತ್ತು .ಇದನ್ನ ಮುಚ್ಚಿಹಾಕಲು ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ಮಾತ್ರ ದುರಾದೃಷ್ಟಕರ ಎಂದು ವೆಂಕಪ್ಪ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Back to top button