ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆ – ದಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಮನವಿ….

ಮಂಗಳೂರು: ಅತ್ಯಾಚಾರಕ್ಕೊಳಗಾಗಿ ಅಮಾನವೀಯವಾಗಿ ಕೊಲೆಯಾದ ವೈದ್ಯೆ ಪ್ರಿಯಾಂಕ ರೆಡ್ಡಿಯವರ ಪ್ರಕರಣವು ಆದಷ್ಟು ಬೇಗ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆಯಾಗಬೇಕು ಹಾಗು ಇಷ್ಟರವರೆಗೆ ನಡೆದ ಎಲ್ಲಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಆದಷ್ಟು ಬೇಗ ಮರಣ ದಂಡನೆ ವಿಧಿಸಬೇಕೆಂದು ಒತ್ತಾಯಿಸಿ ದ.ಕ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ನ ಹಿಲ್ಡಾ ಆಳ್ವ, ಸುರೇಖಾ ಚಂದ್ರಹಾಸ್, ದ.ಕ. ಮಹಿಳಾ ಕಾಂಗ್ರೆಸ್ ನ ಶೋಭಾ ಕೇಶವ್ , ಶಶಿಕಲಾ ಪದ್ಮನಾಭ್, ಅಂಜುಮ್, ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ.ರಾವ್, ಗೀತಾ ಸುವರ್ಣ, ವಿದ್ಯಾ , ಸರಳಾ ಕರ್ಕೇರಾ, ಕವಿತಾ ವಾಸು, ಮೇಬಲ್ ಡಿ ಸೋಜಾ, ಚಂದ್ರಕಲಾ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷೆ ಶಾಂತಲಾ ಗಟ್ಟಿ, ಸಬಿತಾ ಮಿಸ್ಕಿತ್, ನೇತ್ರಾವತಿ, ಚಂದ್ರಕಲಾ ಡಿ.ರಾವ್, ಮೇಘ್ನದಾಸ್, ಮಂಜುಳಾ ನಾಯಕ್, ಆಶಾಲತಾ, ಸರಸ್ವತಿ ಸಾಲಿಯಾನ್ , ಯೂತ್ ಕಾಂಗ್ರೆಸ್ ನ ಕಾರ್ಯದರ್ಶಿ ಸಮರ್ಥ್ ಭಟ್ , ಯಶವಂತ್ ಪ್ರಭು, ವರುಣ್ ನಾಯಕ್ , ಮನ್ಸೂರ್, ಪ್ರದೀಪ್, ಅಹ್ಮದ್ ಮೆಗ್ದಾದ್ ಮುಂತಾದವರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button