ಅನಂತಾಡಿಯಲ್ಲಿ ಜ.4 ರಂದು ಯೋಧ ದೇವೋಭವ….

ಬಂಟ್ವಾಳ: ಕೇಸರಿ ಪ್ರೆಂಡ್ಸ್ ಬಳಗ, ಹಿಂದು ಧಾರ್ಮಿಕ ಸೇವಾ ಸಮಿತಿ ಬಂಟ್ರಿಂಜ, ಅನಂತಾಡಿ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಯೋಧ ದೇವೋಭವ ಕಾರ್ಯಕ್ರಮವು ಜ.4 ರಂದು ಸಂಜೆ 5.30ಕ್ಕೆ ಅನಂತಾಡಿ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.
ಡಾ.ಪ್ರಭಾಕರ ಭಟ್ ಕಲ್ಲಡ್ಕ ಗೌರವ ಉಪಸ್ಥಿತಿಯಲ್ಲಿ ಬಂಟ್ವಾಳ ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ ಬೆಳ್ತಂಗಡಿ, ಕೆ.ಟಿ.ಸುವರ್ಣ, ಕರ್ನಲ್ ಜಗಜೀವನ್ ಭಂಡಾರಿ , ಕ್ಯಾಪ್ಟನ್ ಜ್ರಿಜೇಶ್ ಚೌಟ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವೀರ ಯೋಧರಿಗೆ ಗೌರವಾರ್ಪಣೆ, ಸಾಧಕರಿಗೆ ಅಭಿನಂದನೆ, ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಸಂಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Sponsors

Related Articles

Leave a Reply

Your email address will not be published. Required fields are marked *

Back to top button