ಅರಂತೋಡು ಸ್ವಚ್ಹೋತ್ಸವ -ನಿತ್ಯೋತ್ಸವ ಕಾರ್ಯಕ್ರಮ…

ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಗಾಂಧಿ ಜಯಂತಿ ದಿನದಂದು ಸ್ವಚ್ಯೋತ್ಸವ -ನಿತ್ಯೋತ್ಸವ ಮಾಸಾಚರಣೆ ಉದ್ಘಾಟನಾ ಸಮಾರಂಭ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ‍ ರೈತರ ಕಾಮಗಾರಿಗಳ ಕ್ರಿಯಾ ಯೋಜನೆ ಯ ಅಭಿಯಾನಕ್ಕೆ ಚಾಲನೆ ಯು ಕರೋನ ನಿಯಮಗಳ ಮಧ್ಯೆ ಸರಳವಾಗಿ ಆ.2ರಂದು ಅರಂತೋಡಿನಲ್ಲಿ ನಡೆಯಿತು. ಸಭೆಯ ನಂತರ ಅರಂತೋಡು ಪೇಟೆಯ ವಠಾರವನ್ನು ಸ್ವಚ್ಛಗೊಳಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ..ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾಮೇದಪ್ಪ , ಅರಂತೋಡು ಗ್ರಾಮ ಪಂಚಾಯಿತ್ ನಿಕಟಪೂರ್ವ ಅಧ್ಯಕ್ಷರು ಶ್ರೀಮತಿ ಲೀಲಾವತಿ ಕೊಂಡಂಕೇರಿ ಉಪಾಧ್ಯಕ್ಷರು ಶ್ರೀ ಶಿವಾನಂದ ಕುಕ್ಕುಂಬಳ,ಅರಂತೋಡು ಪ್ರಾಕೃತಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು ..ಕರೋನ ಭೀತಿಯಿಂದ ತಾತ್ಕಾಲಿಕವಾಗಿ ನಿಲ್ಲಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಮತ್ತೆ ಮರುಚಾಲನೆ ನೀಡಲಾಯಿತು.

Sponsors

Related Articles

Leave a Reply

Your email address will not be published. Required fields are marked *

Back to top button