ಉ.ಕ ಬಸ್‌‌ಗಳನ್ನು ಕರಾವಳಿಗೆ ಬಾರದಂತೆ ಕೆಲ ಕಾಲ ತಡೆಹಿಡಿಯಬೇಕು – ಯು.ಟಿ.ಖಾದರ್….

ಮಂಗಳೂರು : ಉತ್ತರ ಕರ್ನಾಟಕ ಬಸ್‌‌ಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಯಬೇಕು. ಹಾಗೇ, ಕೆಎಸ್‌‌ಆರ್‌‌‌ಟಿಸಿ ಬಸ್‌‌ನಲ್ಲಿ ಬರುವವರನ್ನು ತಪಾಸಣೆ ಮಾಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಗಡಿಭಾಗ ತಲಪಾಡಿಯಿಂದ ಸೋಂಕಿತರು ಬಾರದಂತೆ ತಡೆಯಬೇಕು. ಹಾಗಾಗಿ ತಲಪಾಡಿ, ರೈಲು ನಿಲ್ದಾಣದಲ್ಲಿ ತಪಾಸಣೆ ಮಾಡಬೇಕು. ಅಲ್ಲದೇ, ಎಲ್ಲಾ ವಿಮಾನ ನಿಲ್ದಾಣದಲ್ಲಿ ವ್ಯವಸ್ಥಿತ ತಪಾಸಣೆ ಮಾಡಬೇಕು. ಅಷ್ಟು ಸುಲಭವಾಗಿ ವೈರಸ್‌ ಅನ್ನು ತಡೆಯಲು ಸಾಧ್ಯವಿಲ್ಲ, ನಾವೇ ಅದರ ಬಗ್ಗೆ ಜಾಗ್ರತೆ ವಹಿಸಬೇಕು” ಎಂದರು.
ಕೊರೊನಾ ವೈರಸ್‌‌‌ ಆತಂಕ ವಿಚಾರವಾಗಿ ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಜನ ಸಾಮಾನ್ಯರು ಇದಕ್ಕೆ ಸಹಕಾರ ನೀಡಬೇಕು. ಸ್ವಯಂ ನಿಯಂತ್ರಣದಿಂದ ಕೊರೊನಾ ವೈರಸ್‌‌ ಹರಡದಂತೆ ನೋಡಿಕೊಳ್ಳಬೇಕು ಎಂದ ಅವರು ವಿಶೇಷ ವಾರ್ಡ್‌ಗಳನ್ನು ಪ್ರತ್ಯೇಕ ಕಟ್ಟಡದಲ್ಲಿ ಮಾಡಬೇಕು. ಜನ ವಸತಿಯಿದ್ದ ಕಡೆ ವಾರ್ಡ್‌ ಸ್ಥಾಪನೆಗೆ ಒಪ್ಪುವುದಿಲ್ಲ. ದುಡಿಯುವ ವರ್ಗಕ್ಕೆ ಸಮಸ್ಯೆ ನಿಜ, ಹಾಗಾಗಿ ತಿಂಗಳ ಬಾಡಿಗೆಯನ್ನು ಸ್ವಲ್ಪ ಕಡಿಮೆ ಮಾಡಬೇಕು. ಸರಕಾರ ಕೂಡ ದುಡಿಯುವ ವರ್ಗದ ಬಗ್ಗೆ ಕಾಳಜಿ ವಹಿಸಿ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button