ಐವರ್ನಾಡು ಗ್ರಾ.ಪಂ.ಕಚೇರಿಗೆ ಪ್ರಿಂಟರ್ ಕೊಡುಗೆ….

ಸುಳ್ಯ: ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹರೀಶ್ ರಾವ್ .ಯು ಅವರು ಐವರ್ನಾಡು ಗ್ರಾ.ಪಂ.ಕಚೇರಿಗೆ ಪ್ರಿಂಟರನ್ನು ಕೊಡುಗೆಯಾಗಿ ನೀಡಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಕಾರ್ತಿಕ್ ಅವರು ಪ್ರಿಂಟರನ್ನು ಸ್ವೀಕರಿಸಿದರು. ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗದ ಗೌರವ ಸಲಹೆಗಾರರಾಗಿರುವ ಹರೀಶ್ ರಾವ್ ಅವರು ಪಾಲೆಪ್ಪಾಡಿ ಶ್ರೀ ಗಣೇಶೋತ್ಸವದ ಗೌರವಾಧ್ಯಕ್ಷರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ‘ಎಕ್ಸಲೆಂಟ್ ಕಾಪಿಯರ್ ಸೊಲ್ಯೂಷನ್ಸ್’ ನ ಮಾಲಕರಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಶಾಂತಾರಾಮ ಕಣಿಲೆಗುಂಡಿ, ಸಹಕಾರಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ಗ್ರಾಮ ಸಹಾಯಕ ಧರ್ಮಪಾಲ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button