ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯತ್ವದಿಂದ ಹಿಂದೆ ಸರಿದ ಇಬ್ಬರು…..

ಮಂಗಳೂರು: ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದ ತುಳು ಸಾಹಿತ್ಯ ಅಕಾಡೆಮಿ ಸದಸ್ಯತ್ವದಿಂದ ಡಾ| ವೈ.ಎನ್ ಶೆಟ್ಟಿ ಮತ್ತು ಸಾಯಿಗೀತಾ ತಮ್ಮ ಸದಸ್ಯತ್ವದಿಂದ ಹಿಂದೆ ಸರಿದಿದ್ದಾರೆ.
ಡಾ| ವೈ.ಎನ್ ಶೆಟ್ಟಿ ಅವರು 2017 ರಿಂದ ತುಳು ಅಕಾಡೆಮಿ ಸದಸ್ಯನಾಗಿದ್ದೇನೆ. ಹೀಗಾಗಿ ತಾಂತ್ರಿಕವಾಗಿ ಎರಡನೇ ಬಾರಿ ಮತ್ತೆ ಸದಸ್ಯನನ್ನಾಗಿ ಮಾಡುವುದು ಸರಿಯಲ್ಲ. ಈ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಅಧ್ಯಕ್ಷ ಸ್ಥಾನ ಆಯ್ಕೆಯಲ್ಲಿ ಹಿರಿತನ ಕಡೆಗಣಿಸಲಾಗಿದೆ ಎಂದು ಸದಸ್ಯ ಸ್ಥಾನದಿಂದ ದೂರ ಸರಿದಿದ್ದೇನೆ ಎಂದಿದ್ದಾರೆ.
ಸಾಯಿಗೀತಾ ಅವರು ಕೆಲವೊಂದು ಸಾಹಿತ್ಯದ ಕೆಲಸದಲ್ಲಿ ಹಾಗೂ ತುಳು ಜ್ಞಾತಿ ಪದ ಸಂಚಯದ ಡಿಜಿಟಲ್ ಕಾರ್ಯದಲ್ಲಿ ತೊಡಗಿದ್ದು, ಸಂಶೋಧನ ಕಾರ್ಯ ನಡೆಯುತ್ತಿದೆ. ಹೀಗಾಗಿ ಅಕಾಡಮಿ ಸದಸ್ಯೆಯಾಗಿ ಕೆಲಸ ನಿರ್ವಹಿಸುವುದು ಕಷ್ಟ ಸಾಧ್ಯ ಹಾಗಾಗಿ ನಾನು ಸದಸ್ಯತ್ವದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button