ಕುಮಾರಪರ್ವತದಲ್ಲಿ ಕಾಣೆಯಾಗಿದ್ದ ಚಾರಣಿಗ ಸಂತೋಷ್ ಸುಬ್ರಮಣ್ಯದಲ್ಲಿ ಪತ್ತೆ…..

ಸುಬ್ರಮಣ್ಯ: ಬೆಂಗಳೂರಿನಿಂದ ಕುಮಾರ ಪರ್ವತಕ್ಕೆ ಚಾರಣ ಹೊರಟಿದ್ದ 12 ಮಂದಿ ಯುವಕರ ತಂಡದಲ್ಲಿ ನಾಪತ್ತೆಯಾಗಿದ್ದ ಸಂತೋಷ್(೨೫) ಸುಬ್ರಹ್ಮಣ್ಯ ಬಳಿಯ ಕಲ್ಲಗುಡ್ಡೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದ್ದಾರೆ.
ಆದಿ ಸುಬ್ರಹ್ಮಣ್ಯ ಬಳಿಯ ಕಲ್ಲಗುಡ್ಡೆ ಎಂಬಲ್ಲಿ ಸಂತೋಷ್ ಪತ್ತೆಯಾಗಿದ್ದಾರೆ. ಬೆಂಗಳೂರಿನ 12 ಮಂದಿ ಚಾರಣಿಗರ ತಂಡದಲ್ಲಿ ಕುಮಾರ ಪರ್ವತಕ್ಕೆ ಶನಿವಾರ ಚಾರಣ ಹೊರಟಿದ್ದ ಸಂತೋಷ್ ಭಾನುವಾರ ಪರ್ವತ ಇಳಿಯುವ ಹಾದಿಯಲ್ಲಿ ಇದ್ದಕ್ಕಿದ್ದಂತೆ ತಂಡದಿಂದ ಬೇರ್ಪಟ್ಟಿದ್ದರು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಸೋಮವಾರ ಶೋಧ ಕಾರ್ಯಾಚರಣೆ ಆರಂಭಗೊಂಡಿತ್ತು.ಸಂತೋಷ್ ಭಾನುವಾರ ತಮ್ಮ ಸಹ ಚಾರಣಿಗರಿಂದ ಬೇರ್ಪಟ್ಟ ಬಳಿಕ ಒಬ್ಬಂಟಿಯಾಗಿ ಬಂದಿದ್ದರೂ ದಾರಿ ತಪ್ಪಿದ ಕಾರಣ ಕಂಗಾಲಾಗಿದ್ದರು. ಭಾನುವಾರ ರಾತ್ರಿ ಪರ್ವತ ಪ್ರದೇಶದಲ್ಲೇ ಕಳೆದಿದ್ದರು. ಸೋಮವಾರವೂ ಕಾಡು ಮೇಡು ಅಲೆಯುತ್ತಾ ಬರುತ್ತಿದ್ದಾಗ ಪೈಪ್ ಲೈನೊಂದು ಸಿಕ್ಕಿತ್ತು. ಇದು ನಗರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಬಹುದು ಎಂಬುದನ್ನು ಗ್ರಹಿಸಿದ ಸಂತೋಷ್ ಅದೇ ಪೈಪ್ ಹಾದಿ ಹಿಡಿದು ಪರ್ವತ ಇಳಿದು ಮಂಗಳವಾರ ಮಧ್ಯಾಹ್ಮ ಸುಬ್ರಹ್ಮಣ್ಯ ಪಟ್ಟಣ ತಲುಪಿದ್ದಾರೆ. ಸ್ಥಳೀಯರು ಅವರಿಗೆ ನೀರು, ಆಹಾರ ನೀಡಿ ಉಪಚರಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button