ನಳಿನ್‌ಗೆ ರಾಜಕೀಯ ಅಜ್ಞಾನ: ಐವನ್ ಡಿಸೋಜಾ……

ಮಂಗಳೂರು: ಡಿಕೆಶಿ ಬಂಧನ ಪಕ್ಕಾ ರಾಜಕೀಯ ಪ್ರೇರಿತ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ಬಿಜೆಪಿ ಸಹ ಸಂಸ್ಥೆಗಳಂತೆ ದುಡಿಸಿಕೊಳ್ಳುತ್ತಿದೆ. ಇದು ನಳಿನ್‌ಕುಮಾರ್ ಕಟೀಲ್ ಗೆ ಗೊತ್ತಿದ್ದೂ ಸಿದ್ದರಾಮಯ್ಯ ಮೇಲೆ ಆರೋಪ ಮಾಡಿರುವುದು ಅವರ ರಾಜಕೀಯ ಅಜ್ಞಾನವನ್ನು ತೋರಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಮ್ಮ ಮಾತಿನ ಮೇಲೆ ಹಿಡಿತವಿಟ್ಟು ಮಾತನಾಡಲಿ. ಡಿಕೆಶಿ ಬಂಧನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡ ಇದೆ ಎಂದು ನಳಿನ್ ಹೇಳಿಕೆ ನೀಡಿದ್ದಾರೆ. ಅವರು ಹಾಗೆ ಹೇಳುವ ಮೊದಲು ಅದಕ್ಕೆ ಅವರಲ್ಲಿ ಏನು ಆಧಾರ ಇದೆ ಎಂಬುದನ್ನು ಬಹಿರಂಗಪಡಿಸಲಿ.ಬಿಜೆಪಿ-ಆರೆಸ್ಸೆಸ್ ನಡುವಿನ ತಿಕ್ಕಾಟದಿಂದಾಗಿ ಡಮ್ಮಿ ಅಭ್ಯರ್ಥಿಯಾಗಿ ನಳಿನ್ ಕುಮಾರ್‌ ಕಟೀಲ್‌ಗೆ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದೆ. ನಳಿನ್ ಸ್ಥಾನಮಾನ ಏನೆಂಬುದು ಕರಾವಳಿ ಜನರಿಗೆ ಗೊತ್ತಿದೆ. ಅದನ್ನು ಅವರು ಈಗ ರಾಜ್ಯಮಟ್ಟದಲ್ಲಿ ತೋರಿಸುತ್ತಿದ್ದಾರೆ. ಅವರು ಬಾಯಿ ಬಿಟ್ಟಷ್ಟು ಬಿಜೆಪಿಗೆ ಹಾನಿ ಎಂದೂ ಹೇಳಿದರು.

Sponsors

Related Articles

Leave a Reply

Your email address will not be published. Required fields are marked *

Back to top button