ನಾರಾಯಣ್ ಆಚಾರ್ ಸಂಪತ್ತಿನ ಬಗ್ಗೆ ಗುಸು ಗುಸು ಸುದ್ದಿ …

ಮಡಿಕೇರಿ :ಗುಡ್ಡ ಕುಸಿತದಿಂದ ಮಣ್ಣಿನಲ್ಲಿ ಸಿಲುಕಿ ಮೃತಪಟ್ಟ ಅರ್ಚಕ ನಾರಾಯಣ್ ಆಚಾರ್ ಮೃತದೇಹ ಇಂದು ಪತ್ತೆಯಾಗಿದೆ. ಈಗ ಇವರ ಕುಟುಂಬದ ಸಂಪತ್ತಿನ ಬಗ್ಗೆ ಆಶ್ಚರ್ಯಗೊಳಿಸುವ ಗುಸು ಗುಸು ಸುದ್ದಿ ಲಭ್ಯವಾಗಿದೆ.
ಮನೆಯಲ್ಲಿ 10 ಕೆಜಿ ಚಿನ್ನ, ಮೂಟೆಗoಟ್ಟಲೆ ಬೆಳ್ಳಿ, 30 ಲಕ್ಷ ಹಣ , ತಲಕಾವೇರಿ ಸುತ್ತಮುತ್ತ 100 ಎಕರೆ ಜಮೀನು ,
ಮುಂಡಾರುಮಲೈ ಅರಣ್ಯದ ಬಳಿ 50 ಎಕರೆ ಕೃಷಿ ಭೂಮಿ, ಚೀರಂಗಾರದಲ್ಲಿ 7 ಎಕರೆ ಕಾಫಿ ತೋಟ, ತಣ್ಣಿಮಾನಿ ಬಟ್ಟಕಾಡು ಬಳಿ 25 ಎಕರೆ ಏಲಕ್ಕಿ ತೋಟ , 25 ಎಕರೆ ಕಾಪಿ ತೋಟ, ಭಾಗಮಂಡಲ ಜೂನಿಯರ್ ಕಾಲೇಜು ಮೈದಾನದ ಬಳಿ 12 ಎಕರೆ ಜಮೀನು, 4 ಲಕ್ಷ ಮೌಲ್ಯದ 10 ಕ್ವಿಂಟಾಲ್ ಕಾಳು ಮೆಣಸು, 8 ಲಕ್ಷ ಮೌಲ್ಯದ ಡಸ್ಟರ್ ಕಾರು, ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಮನೆ, 15 ಲಕ್ಷ ಮೌಲ್ಯದ 5 ಕ್ವಿಂಟಾಲ್ ಏಲಕ್ಕಿ, ಸೇರಿದಂತೆ ಇನ್ನಿತರ ಆಸ್ತಿ ಪತ್ರಗಳು ಕೂಡಾ ಮಣ್ಣಿನಲ್ಲಿ ಮುಚ್ಚಹೋಗಿವೆ ಎನ್ನಲಾಗುತ್ತಿದ್ದು, ಅರ್ಚಕರ ಕುಟುಂಬದ ಆಸ್ತಿ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರಬರುತ್ತಿವೆ.

Sponsors

Related Articles

Leave a Reply

Your email address will not be published. Required fields are marked *

Back to top button