ನೇರಳಕೆಟ್ಟೆಯಲ್ಲಿ ಆಧಾರ್ ತಿದ್ದುಪಡಿ ಅಭಿಯಾನ….

ಬಂಟ್ವಾಳ: ನೇರಳೆಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ಮತ್ತು ಅಂಚೆ ಇಲಾಖೆ ಪುತ್ತೂರು ಇವರ ಸಹಕಾರದೊಂದಿಗೆ ಇತ್ತೀಚೆಗೆ ಏರ್ಪಡಿಸಲಾದ ಆಧಾರ್ ತಿದ್ದುಪಡಿ ಅಭಿಯಾನವನ್ನು ಬ್ಯಾಂಕಿನ ಸಭಾಂಗಣದಲ್ಲಿ ಸಹಕಾರಿ ಸಂಘದ ನಿರ್ದೇಶಕ ಡಿ.ತನಿಯಪ್ಪ ಗೌಡ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಎಮ್.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಹಿರಿಯ ಮೇಲ್ವಿಚಾರಕ ಲೋಕನಾಥ ಪೂಜಾರಿ ಮಾತನಾಡಿ ಆಧಾರ್ ಕಾರ್ಡಿನ ಅವಶ್ಯಕತೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಎನ್. ದಿನಕರ ನಾಯಕ್ , ಉದ್ಯಮಿ ರಾಮ್ ಕಿಶನ್ ರೈ ನೆಲ್ತೊಟ್ಟು ಉಪಸ್ಥಿತರಿದ್ದರು. 272 ಮಂದಿ ಇದರ ಪ್ರಯೋಜನ ಪಡೆದುಕೊಂಡರು. ಲೆಕ್ಕಿಗ ಕೆ.ಅರುಣ್ ಶೆಟ್ಟಿ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button