ನ.ಪಂ. ಸದಸ್ಯ ಕೆ.ಎಸ್. ಉಮ್ಮರ್ ಹಾಗು ಅರ್. ಕೆ ಮಹಮ್ಮದ್ ನಡುವೆ ಹೊಡೆದಾಟ….

ಸುಳ್ಯ: ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್ ಹಾಗು ಕಾಂಗ್ರೆಸ್ ಮುಖಂಡ ಅರ್. ಕೆ ಮಹಮ್ಮದ್ ನಡುವೆ ಹೊಡೆದಾಟ ನಡೆದ ಘಟನೆ ವರದಿಯಾಗಿದೆ.
ಇಂದು ಮದ್ಯಾಹ್ನ ಉಮ್ಮರ್ ಅವರು ಮಸೀದಿಯಿಂದ ಹೊರಬಂದು ಅರ್. ಕೆ ಮಹಮ್ಮದ್ ಅವರೊಂದಿಗೆ ಮಾತಿಗಿಳಿದರೆಂದೂ, ಮಾತಿಗೆ ಮಾತು ಬೆಳೆದು ಅವರಿಬ್ಬರೊಳಗೆ ತಳ್ಳಾಟ ನಡೆಯಿತೆಂದೂ ತಿಳಿದುಬಂದಿದೆ. ಮಸೀದಿಯ ಅಕ್ಕ ಪಕ್ಕದಲ್ಲಿದ್ದ ಸಾರ್ವಜನಿಕರು ಇಬ್ಬರನ್ನೂ ಸಮಾಧಾನ ಪಡಿಸಿದರೆನ್ನಲಾಗಿದೆ. ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಡೆದಾಟಕ್ಕೆ ಕಾರಣ ತಿಳಿದು ಬಂದಿಲ್ಲ.

Sponsors

Related Articles

Leave a Reply

Your email address will not be published. Required fields are marked *

Back to top button