ನ.11 ರಂದು ಅಂತರಗುತ್ತು ಶ್ರೀಗುಡ್ಡೆ ಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಚಾವಡಿಯ ಶಿಲಾನ್ಯಾಸ ಕಾರ್ಯಕ್ರಮ…

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಅಂತರಗುತ್ತು ಶ್ರೀಗುಡ್ಡೆ ಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಚಾವಡಿಯ ಶಿಲಾನ್ಯಾಸ ಕಾರ್ಯಕ್ರಮ ನ.11 ರಂದು ಜರುಗಲಿದೆ.
ವಿಟ್ಲ- ಕಲ್ಲಡ್ಕ ರಾಜ್ಯ ಹೆದ್ದಾರಿ ಮದ್ಯದಲ್ಲಿ ಸುಮಾರು ಒಂದು ಕಿ.ಮೀ ದೂರದಲ್ಲಿ ಸುಳ್ಳಮಲೆ ತಪ್ಪಲಲ್ಲಿ ಈ ಅಂತರಗುತ್ತು ಚಾವಡಿಯು ಇದ್ದು ಪುರಾತನ ಕಾಲದಲ್ಲಿ ಅಮ್ಮು ಶೆಟ್ಟಿ ಎಂಬವರು ಗ್ರಾಮದೈವಗಳಿಗೆ ನೇಮ ನೀಡಿ ಅಂತರಗುತ್ತು ಅಮ್ಮು ಶೆಟ್ಟಿ ಎಂಬ ಹೆಸರಿನಲ್ಲಿ ಗಡಿ ಪ್ರಧಾನರಾಗಿದ್ದರು.ಅವರ ಕಾಲಘಟ್ಟದ ಬಳಿಕ ನಾನಾ ಕಾರಣಗಳಿಂದ ಈ ಚಾವಡಿಯು ಹಿಂದಿನ ವೈಭವವನ್ನು ಕಳೆದು ಜೀರ್ಣಾವಸ್ಥೆಗೆ ಬಂದಿತ್ತು.ಈಗ ಗ್ರಾಮದೈವಕ್ಕೆ ಸಂಬಂಧಿಸಿದ ನಾಲ್ಕು ಗುತ್ತು- ಮೂರು ಗ್ರಾಮದ ಒಂಭತ್ತು ಚಾವಡಿ ಮತ್ತು ಹದಿನಾರು ಕಂಬಳದ ಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರನ್ನೊಳಗೊಂಡ ಅಭಿವೃದ್ಧಿ ಸಮಿತಿಯು ಅಂದಾಜು ಸುಮಾರು ರೂ. 75 ಲಕ್ಷ ವೆಚ್ಚದಲ್ಲಿ ಗತಕಾಲದ ವೈಭವ ದಂತೆ ಪುರಾತನ ಶೈಲಿಯ ವಿಶೇಷ ವಾಸ್ತು ವಿನ್ಯಾಸದಲ್ಲಿ ಈ ಚಾವಡಿಯ ಪುನರ್ ನಿರ್ಮಾಣ ಮಾಡಿ ಜೀರ್ಣೋದ್ಧಾರ ಮಾಡುವ ಪುಣ್ಯ ಕಾರ್ಯಕ್ಕೆ ಚಿಂತನೆ ನಡೆಸಿದೆ.ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಈ ಮೂಲಕ ವಿನಂತಿಸಿದ್ದಾರೆ

Sponsors

Related Articles

Leave a Reply

Your email address will not be published. Required fields are marked *

Back to top button