ಪುತ್ತೂರು ದಸರಾ ಮಹೋತ್ಸವ -ಗುರುವಾರ ವೈಭವದ ಶೋಭಾಯಾತ್ರೆ….

ಪುತ್ತೂರು:ಪುತ್ತೂರು ತಾಲೂಕಿನ ಸಂಪ್ಯ ಉದಯಗಿರಿ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ವತಿಯಿಂದ ನಡೆದ 17ನೇ ವರ್ಷದ ಪುತ್ತೂರು ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆ ಗುರುವಾರ ಸಂಜೆ ನಡೆಯಲಿದೆ ಎಂದು ಎಂದು ಸಮಿತಿಯ ಸಂಚಾಲಕರಾದ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ.
ಸಂಪ್ಯ ಉದಯಗಿರಿ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಗಣಪತಿ, ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸೆ.29ರಂದು ಪ್ರತಿಷ್ಠಾಪನೆ ಮಾಡಿ ಆರಾಧಿಸಿಕೊಂಡು ಬರಲಾಗಿದ್ದು, ವಿಗ್ರಹಗಳ ಶೋಭಾಯಾತ್ರೆಯು ಗುರುವಾರ ಸಂಜೆ ಆರಂಭಗೊಳ್ಳಲಿದೆ. ಈ ಭವ್ಯ ಶೋಭಾಯಾತ್ರೆಯು ಸಂಪ್ಯ ಉದಯಗಿರಿ ಕ್ಷೇತ್ರದಿಂದ ಆರಂಭಗೊಂಡು ಮಾಣಿ ಮೈಸೂರು ಹೆದ್ದಾರಿಯಾಗಿ, ದರ್ಬೆ ಮೂಲಕ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಸಾಗಿ ಪುತ್ತೂರಿನ ಮಹಾಲಿಂಗೇಶ್ವರ ದೇವಳ ವಠಾರದ ತನಕ ನಡೆದು ಸಂಪನ್ನಗೊಳ್ಳಲಿದೆ. ಶೋಭಾಯಾತ್ರೆಯಲ್ಲಿ ಗೊಂಬೆ ಕುಣಿತ, ತಾಲೀಮು ಪ್ರದರ್ಶನ, ಚೆಂಡೆ ವಾದನ, ವಿವಿಧ ಬಗೆಯ ಸ್ತಬ್ಧ ಚಿತ್ರಗಳು, ಸುಡುಮದ್ದು ಪ್ರದರ್ಶನ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಲಿದೆ. ಸಂಜೆ 3 ಗಂಟೆಗೆ ಆರಂಭಗೊಳ್ಳಲಿರುವ ಶೋಭಾಯಾತ್ರೆ ರಾತ್ರಿ 8 ಗಂಟೆಗೆ ಮುಕ್ತಾಯವಾಗಲಿದೆ.
ಉದಯಗಿರಿ ಕ್ಷೇತ್ರದಲ್ಲಿ ಬೆಳಿಗ್ಗೆ ಗಂಟೆ 8ರಿಂದ ಚಂಡಿಕಾ ಹೋಮ ಆರಂಭಗೊಳ್ಳಲಿದೆ. ಮಹಿಳೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಚಂಡಿಕಾ ಹವನ ಸೇವೆ ಮಾಡಿದವರಿಗೆ ಸೀರೆ ಪ್ರಸಾದ ವಿತರಣೆ ಹಾಗೂ ಶೋಭಾಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಬೇಕು ಎಂದು ಪ್ರೀತಂ ಪುತ್ತೂರಾಯ ಅವರು ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button