ಪ್ರತಿಭಾ ಕಾರಂಜಿ: ಯಕ್ಷಗಾನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ…..

ಪುತ್ತೂರು: ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ `ಪ್ರತಿಭಾ ಕಾರಂಜಿ’ ಯಕ್ಷಗಾನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ `ಯಕ್ಷ ಚಿಣ್ಣರು’ ಭಾಗವಹಿಸಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವೈಯಕ್ತಿಕ ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಿರಿಯ ವಿಭಾಗದಲ್ಲಿ ಧನುಷ್, ಹಿರಿಯ ವಿಭಾಗದಲ್ಲಿ ಕು.ಅವನಿ ಬೆಳ್ಳಾರೆ, ಪ್ರೌಢವಿಭಾಗದಲ್ಲಿ ಕು. ಶ್ರೇಯಾ ಆಚಾರ್ ಸ್ಪರ್ಧಿಸಿದ್ದರು. ಅದೇ ರೀತಿ ಗುಂಪು ವಿಭಾಗ ಸ್ಪರ್ಧೆಯಲ್ಲಿ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ. ಈ ವಿಭಾಗದಲ್ಲಿ ಪರೀಕ್ಷಿತ್, ಬಬಿನ್ ರೈ, ಧನುಷ್, ಯತೀನ್, ಯತೀಶ್, ಮುಖೇಶ್ ಕೃಷ್ಣ, ಭವಿಷ್, ಮಿಥುನ್ ಭಾಗವಹಿಸಿದ್ದರು.
ಶಾಲಾ ಶಿಕ್ಷಕರಾದ ಯಕ್ಷಗಾನ ಕಲಾವಿದ ಚಂದ್ರಶೇಖರ ಸುಳ್ಯಪದವು ಅವರ ಸಂಯೋಜನೆಯಲ್ಲಿ ಬಾಲಕೃಷ್ಣ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು.

Sponsors

Related Articles

Leave a Reply

Your email address will not be published. Required fields are marked *

Back to top button