ವಾರ್ಷಿಕ ಜಾತ್ರಾ ಮಹೋತ್ಸವ, ಮಹಾಶಿವರಾತ್ರಿ ಆಮಂತ್ರಣ ಪತ್ರ ಬಿಡುಗಡೆ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜಿಪ ಮೂಡ ಇಲ್ಲಿ ಮಾ. 8 ರಂದು ಮಹಾಶಿವರಾತ್ರಿ ಹಾಗೂ ಮಾ.11 ರಂದು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಬಗ್ಗೆ ಸಿದ್ಧತಾ ಸಭೆ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ನಡೆಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಉತ್ಸವ ಸಮಿತಿ ಅಧ್ಯಕ್ಷ ದೇವಿ ಪ್ರಸಾದ ಪೂoಜ, ಜಯ ಶಂಕರ ಬಾಸ್ರಿತ್ತಾಯ, ಕೆ. ಸದಾನಂದ ಶೆಟ್ಟಿ, ಕೆ ಸೀತಾರಾಮ ಶೆಟ್ಟಿ, ಗಿರೀಶ್ ಕುಮಾರ್ ಪೆರ್ವ, ರಮೇಶ್ ಪೂಜಾರಿ ಅನ್ನಪಾಡಿ, ಲಿಂಗಪ್ಪ ದೊಟ, ವಿಶ್ವನಾಥ ಬೆಳ್ಛೇಡ, ಯೋಗೀಶ್ ಬೆಲ್ಚಡ, ಬಾಲಕೃಷ್ಣ ಕುಲಾಲ್, ಚಂದ್ರಹಾಸ, ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ. ವಿವಿಧ ತಂಡಗಳಿಂದ ಭಜನಾ ಕಾರ್ಯ ಕ್ರಮ, ಯಕ್ಷಗಾನ ತಾಳಮದ್ದಳೆ ದಕ್ಷಾಧ್ವರ, ಅನ್ನದಾನ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಕೋರಲಾಯಿತು.

Sponsors

Related Articles

Back to top button