ಬಂಟ್ವಾಳ ತಾಲೂಕು 20 ನೇ ಕನ್ನಡ ಸಾಹಿತ್ಯ ಸಮ್ಮೇಳನ – ಕವನ, ಚುಟುಕು, ಸಣ್ಣಕಥೆ, ಹಾಸ್ಯಲೇಖನ ಆಹ್ವಾನ….

ಬಂಟ್ವಾಳ: ಡಿ. 28 ಮತ್ತು 29 ರಂದು ಮಾಣಿಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 20 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ “ಸಾಹಿತ್ಯ ಪ್ರಸ್ತುತಿ” ಗೋಷ್ಠಿಯಲ್ಲಿ ಸ್ವರಚಿತ ಕವನ, ಚುಟುಕು, ಸಣ್ಣಕಥೆ ಹಾಗೂ ಹಾಸ್ಯಲೇಖನ ಈ ವಿಭಾಗಗಳಲ್ಲಿ ಪ್ರಸ್ತುತಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಭಾಗವಹಿಸಲಿಚ್ಛಿಸುವ ಸಾರ್ವಜನಿಕರು ಇದೇ ತಿಂಗಳ ದಿನಾಂಕ 20 ರ ಒಳಗಾಗಿ ತಮ್ಮ ರಚನೆಗಳನ್ನು ತಮ್ಮ ಹೆಸರು, ವಿಳಾಸ, ಮೊಬೈಲ್ ನಂಬ್ರ ಸಹಿತ ಶ್ರೀ.ಕೆ. ಮೋಹನ ರಾವ್, ‘ತಾರಾ’ ,ಅಂಚೆ :ಮೊಡಂಕಾಪು ,ಬಂಟ್ವಾಳ ತಾಲೂಕು, 574719 , ಈ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಮೋಹನ ರಾವ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button