ಬಿ.ಯಂ.ಯಸ್ ಆಟೋ ರಿಕ್ಷಾ ಚಾಲಕ, ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ ….

ಪುತ್ತೂರು: ಬಿ.ಯಂ.ಯಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಡಾ. ಎಂ.ಕೆ.ಪ್ರಸಾದ್ ಮರು ಆಯ್ಕೆಗೊಂಡಿದ್ದು, ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಮರೀಲು, ಕೋಶಾಧಿಕಾರಿಯಾಗಿ ಕೃಷ್ಣ ಚೆಟ್ಟಿಯಾರ್ ಅವರು ಆಯ್ಕೆಗೊಂಡಿದ್ದಾರೆ.
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸಂಘದ ಉಪಾಧ್ಯಕ್ಷರುಗಳಾಗಿ ಶ್ರೀನಿವಾಸ ರೈ, ವೀರಪ್ಪ ಪೂಜಾರಿ, ಬಿ.ಕೆ.ಸುಂದರ ನಾಯ್ಕ್, ವಿಠಲ ಪೂಜಾರಿ, ರಾಜೇಶ್ ಪೆರಿಗೇರಿ, ಬಾಬು ಪೂಜಾರಿ, ದಿನೇಶ್ ಗೌಡ, ಜೊತೆ ಕಾರ್ಯದರ್ಶಿಗಳಾಗಿ ಜನಾರ್ದನ ಪೂಜಾರಿ, ನವೀನ್ ಕೋಟ್ಯಾನ್, ಹರಿಪ್ರಸಾದ್, ನಾರಾಯಣ ಪೂಜಾರಿ, ಸುರೇಶ್ ಕೋಟ್ಯಾನ್, ಲಕ್ಷ್ಮಣ ಗೌಡ ಆಯ್ಕೆಗೊಂಡಿದ್ದು, ಸಲಹೆಗಾರರಾಗಿ ಬಿ.ಕೆ.ದೇವಪ್ಪ ಗೌಡ, ಬಿ.ಮೋಹನ್ ಹೆಗ್ಡೆ, ಸತೀಶ್ ಪ್ರಭು ಮಣಿಯ, ರಾಘವೇಂದ್ರ ರೈ, ಶಿವಪ್ಪ ಪೂಜಾರಿ, ನಾರಾಯಣ ಗೌಡ, ಸುರೇಶ್ ಸುಧಾಕರ್ ನಾಯಕ್, ಹುಸೈನ್ ಜಿ, ವಾಲ್ಟರ್ ರೆಬೆಲ್ಲೋ, ಬಾಲಕೃಷ್ಣ ರೈ, ಮಂಜುನಥ ರೈ, ಭಾಸ್ಕರ್ ನಾೈಕ್, ಮಹೇಶ್ ಪ್ರಭು, ವಿಕ್ರಂ ಪರ್ಲಡ್ಕ, ಕಾನೂನು ಸಲಹೆಗಾರರಾಗಿ ಮಾಧವ ಪೂಜಾರಿ, ಪತ್ರಿಕಾ ಸಂಪರ್ಕ ಪ್ರಮುಖ್ ಆಗಿ ಮನೋಹರ್ ಕೋಡಿಜಾಲು ಅವರು ಆಯ್ಕೆಗೊಂಡಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button