ಮಾನವೀಯತೆ ಮೆರೆದ ಶಾಸಕ ಯು.ಟಿ.ಖಾದರ್…

ಮಂಗಳೂರು: ಶಾಸಕ ಯು.ಟಿ.ಖಾದರ್ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ನಾಗರಿಕರೊಬ್ಬರ ಕರೆ ಮಾಡಿ ಆ್ಯಂಬುಲೆನ್ಸ್ ಬೇಕೆಂದು ಹೇಳಿದ್ದರು. ಈ ವೇಳೆ ಆಂಬ್ಯುಲೆನ್ಸ್ ಗೆ ಕರೆ ಮಾಡಿ ವ್ಯಕ್ತಿ ಇರುವ ಕಡೆ ತೆರಳುವಂತೆ ಸೂಚಿಸಿದ್ದರು. ಆದರೆ ಅರ್ಧ ಗಂಟೆ ಕಳೆದರೂ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಪುನಃ ಕರೆ ಬಂದಾಗ ಯು.ಟಿ.ಖಾದರ್ ಸ್ವತಃ ಸ್ಥಳಕ್ಕೆ ತೆರಳಿದರು.
ಅಷ್ಟರಲ್ಲಿ ಆಂಬ್ಯುಲೆನ್ಸ್ ಬಂದಿತ್ತಾದರೂ ಯಾರೊಬ್ಬರೂ ಕೂಡಾ ಆತನ ಹತ್ತಿರ ಹೋಗಿ ಆಂಬ್ಯುಲೆನ್ಸ್ ಹತ್ತಿಸಲು ತಯಾರಿರಲಿಲ್ಲ. ಆದರೆ ಶಾಸಕ ಯು.ಟಿ.ಖಾದರ್ ರವರನ್ನು ಕಂಡಾಗ ಆತ ಓಡೋಡಿ ಶಾಸಕರ ಹೆಸರು ಕರೆದು ಹತ್ತಿರ ಬಂದಾಗ ಸ್ವತಃ ಖಾದರ್ ಆತನಿಗೆ ಮಾಸ್ಕ್ ಹಾಕಿ ಆಂಬ್ಯುಲೆನ್ಸ್ ಹತ್ತಿಸಿ ವೆನ್ಲಾಕ್ ಗೆ ಕರೆದು ಕೊಂಡು ಹೋಗುವಂತೆ ಸೂಚಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button