ಮುನವ್ವಿರುಲ್ ಇಸ್ಲಾಂ ಮದರಸ ಗಾಂಧಿನಗರ ಮಾಜಿ ಸದರ್ ಉಸ್ತಾದ್ ಕೆ. ಕೆ. ಅಲಿ ಮುಸ್ಲಿಯಾರ್ ಪಟ್ಟಾoಬಿ ಇವರ ಸೇವಾರoಭದ 50 ನೇ ವರ್ಷದ ಸವಿನೆನಪು…

ಐದು ದಶಕಗಳ ಶಿಷ್ಯ ಸಂಬಂಧ ಹೊಂದಿದ ಗುರು ನಿಜಕ್ಕೂ ಅಭಿನಂದನೀಯ ಇಂತಹ ಸಮಾರಂಭ ಮುಂದಿನ ಪೀಳಿಗೆಗೆ ಮಾದರಿ -ಅಶ್ರಫ್ ಖಾಮಿಲ್ ಸಖಾಫಿ…

ಸುಳ್ಯ: ಸುಳ್ಯ ಗಾಂಧಿನಗರ ಮದರಸ (1973-2023), ಪೆರಾಜೆ, ಮೊಗರ್ಪಣೆ, ಸಂಪಾಜೆ ಮಸ್ಜಿದ್ ಮದರಸ ಗಳಲ್ಲಿ ಕರ್ತವ್ಯ ನಿರ್ವಹಿಸಿದ ಕೆ. ಕೆ. ಅಲಿ ಉಸ್ತಾದ್ ಪಟ್ಟಾoಬಿ ಯವರು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಿನ್ನಲೆ ಯಲ್ಲಿ ಅಭಿನಂದನೆ ಮತ್ತು ಬೀಳ್ಕೊಡುಗೆ ಗಾಂಧಿನಗರ ಮದರಸ ಸಭಾoಗಣದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜಮಾಅತ್ ಮಾಜಿ ಅಧ್ಯಕ್ಷ ಆದo ಹಾಜಿ ಕಮ್ಮಾಡಿ, ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಮೊಗರ್ಪಣೆ, ಕೇಪೆಕ್ ನಿಗಮದ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್ ಜಮಾಅತ್ ಕಮಿಟಿ ಉಪಾಧ್ಯಕ್ಷ ಮಹಮ್ಮದ್ ಹಾಜಿ ಕೆಎಂಎಸ್,ಕಾರ್ಯದರ್ಶಿಕೆ. ಬಿ. ಅಬ್ದುಲ್ ಮಜೀದ್, ಖಜಾಂಚಿ ಹಾಜಿ ಕೆ. ಎಂ. ಮುಹಿಯದ್ದೀನ್,ನಿರ್ದೇಶಕರುಗಳಾದ ಕೆ ಎಸ್ ಉಮ್ಮರ್, ಹಮೀದ್ ಹಾಜಿ, ಹಮೀದ್ ಬೀಜಕೊಚ್ಚಿ, ಜಿ. ಎಂ. ಇಬ್ರಾಹಿಂಶಿಲ್ಪ, ಅನ್ಸಾರುಲ್ ಮುಸ್ಲಿಮೀನ್, ಎಲಿಮಲೆ ಜುಮಾ ಮಸ್ಜಿದ್ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಅಸೋಸಿಯೇಷನ್ ಅಧ್ಯಕ್ಷ ಶುಕೂರ್ ಹಾಜಿ, ಕಾರ್ಯದರ್ಶಿ ಬಿ. ಎಂ. ಹನೀಫ್, ಖಜಾಂಚಿ ಎಸ್. ಪಿ. ಅಬೂಬಕ್ಕರ್, ಮೊಗರ್ಪಣೆ ಜುಮ್ಮಾ ಮಸ್ಜಿದ್ ಮಾಜಿ ಅಧ್ಯಕ್ಷ ಸಮದ್ ಹಾಜಿ ಖಲೀದಿ ಯಾ,ಅನ್ಸಾರ್ ನಿರ್ದೇಶಕರುಗಳಾದ ಹಾಜಿ ಅಬ್ದುಲ್ ಗಫಾರ್, ಅಬ್ದುಲ್ ಹಮೀದ್ ಜನತಾ,ಪೆರಾಜೆ ಜಮಾಅತ್ ನಾಸಿರ್ ಇಂಜಿನಿಯರ್, ಆದ್ರಾಮ ಮಾವಿನಕಟ್ಟೆ,ಮೊದಲಾವರು ಉಪಸ್ಥಿತರಿದ್ದರು.ಮುಅಝಿನ್ ರವೂಫ್ ಝುಹರಿ ಖಿರಾಅತ್ ಪಠಿಸಿದರು.

whatsapp image 2023 05 05 at 12.19.08 pm
Sponsors

Related Articles

Back to top button