ಸಚಿವ ಈಶ್ವರಪ್ಪ ಹೇಳಿಕೆಗೆ ಟಿ ಎಂ ಶಹೀದ್ ತೆಕ್ಕಿಲ್ ಖಂಡನೆ…

ಸುಳ್ಯ: ಕಾಂಗ್ರೆಸ್ ನಾಯಕರ ಕುರಿತು ಅವಾಚ್ಯ ಶಬ್ದ ಪ್ರಯೋಗ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪನವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇದು ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ಟೀಕಿಸಿದ್ದಾರೆ.
ಪದೇ ಪದೇ ಮುಸ್ಲಿಮರನ್ನು ಟೀಕಿಸುವ ಈಶ್ವರಪ್ಪನವರಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತಿಲ್ಲ ಅವರು ಕೂಡಲೇ ತಮ್ಮ ಮಾತನ್ನು ವಾಪಸ್ ಪಡೆದುಕೊಳ್ಳಬೇಕೆಂದು ಟಿ ಎಂ ಶಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.ಬೊಮ್ಮಾಯಿ ಸರಕಾರವು ಗೊತ್ತು ಗುರಿ ಇಲ್ಲದ ಸರಕಾರ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡಾಗಿನಿಂದ ಭಿನ್ನಮತವನ್ನು ಸರಿಪಡಿಸಲು ಸಾದ್ಯವಾಗದ ಮುಖ್ಯಮಂತ್ರಿ ರಾಜ್ಯದ ಆಡಳಿತವನ್ನು ಹೇಗೆ ನಡೆಸಬಹುದು ಎಂದು ಪ್ರಶ್ನಿಸಿದ ಟಿ ಎಂ ಶಹೀದ್ ತೆಕ್ಕಿಲ್ ರವರು ಸರಕಾರದಲ್ಲಿ ಕೋಳಿ ಮೊಟ್ಟೆ ಹೆಸರಿನಲ್ಲಿ 25 ಲಕ್ಷ ರೂಪಾಯಿ ಭ್ರಷ್ಟಾಚಾರವನ್ನು ಮಾಡಿದ ಶಶಿಕಲಾ ಜೊಲ್ಲೆ ಯಂತವರನ್ನು ಮಂತ್ರಿ ಮಾಡಿದ ಇವರಿಂದ ಯಾವ ತರದ ಆಡಳಿತವನ್ನು ನಿರೀಕ್ಷಿಸಬಹುದು. ಹಾಗಾಗಿ ಈ ಸರಕಾರ ಕೂಡಲೆ ತೊಲಗಬೇಕು ಎಂದು ಟಿ ಎಂ ಶಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.

Sponsors

Related Articles

Back to top button