ಯುವವಾಹಿನಿ ಸ್ಥಾಪಕಾಧ್ಯಕ್ಷ ಬಿ.ತಮ್ಮಯ ಅವರಿಗೆ ನುಡಿನಮನ…

ಬಂಟ್ವಾಳ: ಇತ್ತೀಚೆಗೆ ನಿಧನ ಹೊಂದಿದ ಸಾಹಿತಿ,ನಿವೃತ್ತ ಕಂದಾಯ ಇಲಾಖಾಧಿಕಾರಿ, ಯುವವಾಹಿನಿ ಸ್ಥಾಪಕಾಧ್ಯಕ್ಷ ಬಿ.ತಮ್ಮಯ ಅವರಿಗೆ ನುಡಿನಮನ, ಸಾರ್ವಜನಿಕ ಸಂತಾಪ ಸೂಚಕ ಸಭೆ ಬಂಟವಾಳ ಬಂಟರ ಭವನದಲ್ಲಿ ಸೋಮವಾರ ನಡೆಯಿತು.

ಈ ಸಂದರ್ಭ ಮಾತನಾಡಿದ ನಾನಾ ಕ್ಷೇತ್ರಗಳ ಗಣ್ಯರು, ತಮ್ಮಯರ ಸಾಧನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ, ತಮ್ಮಯರ ಸಹೋದರ ರಾಮ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಸಸಿಹಿತ್ಲು, ಲೇಖಕಿ ಬಿ.ಎಂ.ರೋಹಿಣಿ, ಪಿಂಚಣಿದಾರರಸಂಘದ ಪರವಾಗಿ ಮಧುಕರ ಮಲ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಜಯಾನಂದ ಪೆರಾಜೆ, ಕೈಕುಂಜೆ ಅಭಿವೃದ್ಧಿ ಸಂಘದ ಪರವಾಗಿ ಪ್ರೊ.ಅನಂದ ಪದ್ಮನಾಭ ರಾವ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿವಿಧ ಸಂಘಟನೆಗಳಲ್ಲಿ ತಮ್ಮಯ್ಯರೊಂದಿಗೆ ಒಡನಾಡಿಗಳಾಗಿದ್ದ ಎ.ಪಿ.ಭಟ್, ಮುದ್ದು ಮೂಡುಬೆಳ್ಳೆ, ಪ್ರಸನ್ನ ಪಕ್ಕಳ ಮೊದಲಾದವರು ಮಾತನಾಡಿದರು.

 

Sponsors

Related Articles

Leave a Reply

Your email address will not be published. Required fields are marked *

Back to top button