ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ-ಡಿ ವಿ ಎಸ್….

ಮಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ. ಅವರ ಆಸೆ ಏನೆಂಬುದು ಗೊತ್ತಿಲ್ಲ. ಸಿದ್ದರಾಮಯ್ಯ ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ರಸಗೊಬ್ಬರ ಕೊರತೆ ಇಲ್ಲ. ನಮ್ಮಲ್ಲಿ ಶೇ.80 ರಸಗೊಬ್ಬರ ಉತ್ಪಾದನೆಯಾಗುತ್ತಿದ್ದು, ಶೇ.20 ಆಮದು ಮಾಡಿಕೊಳ್ಳಲಾಗುತ್ತಿದೆ. ಬಂದ್ ಆಗಿರುವ ಬೃಹತ್ ರಸಗೊಬ್ಬರ ಕಾರ್ಖಾನೆಗಳನ್ನು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಮತ್ತೆ ತೆರೆಯುವ ಬಗ್ಗೆ ಚಿಂತನೆ ಇದೆಎಂದರು. ಅಮೆರಿಕದ ಅಧ್ಯಕ್ಷರ ಜತೆ ಭಾರತದ ಪ್ರಧಾನಿ, ಭಾರತೀಯರನ್ನು ಉದ್ದೇಶಿಸಿ ಮಾತನಾಡುವುದು ಐತಿಹಾಸಿಕ ಸನ್ನಿವೇಶ. ವಿಶ್ವಕ್ಕೆ ಭಾರತದ ಬಗ್ಗೆ ಬಲವಾದ ನಂಬಿಕೆ, ವಿಶ್ವಾಸ ಇದೆ ಎನ್ನುವುದು ಇದರಿಂದ ಸ್ಪಷ್ಟ. ಮೋದಿ ದೇಶದ ಶಕ್ತಿಯನ್ನು ವಿಶ್ವಕ್ಕೆ ತಿಳಿಸಿರುವುದು ಇದಕ್ಕೆ ಕಾರಣ ಎಂದರು.

Sponsors

Related Articles

Leave a Reply

Your email address will not be published. Required fields are marked *

Back to top button