ರಾಮಕುಂಜದಲ್ಲಿ ಸರಣಿ ಕಳ್ಳತನದ ಆರೋಪಿ ಬಂಧನ…

ಕಡಬ : ರಾಮಕುಂಜದ ವಿವಿಧೆಡೆ ಕೆಲವು ದಿನಗಳ ಹಿಂದೆ ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಓರ್ವನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಳ ತಾಲೂಕು ಸಜಿಪನಡು ಪೆರುವಮನೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಉಮ್ಮರ್‌ ಫಾರೂಕ್‌ (27) ಎಂದು ತಿಳಿದು ಬಂದಿದೆ.ಕಡಬ ಸಹಿತ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಒಟ್ಟು 16 ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಕುಂಜದ ಎಸ್‌.ಬಿ.ಐ. ಗ್ರಾಹಕರ ಸೇವಾ ಕೇಂದ್ರ, ಮೊಬೈಲ್‌ ಅಂಗಡಿ, ಪಂಚಾಯತ್‌ ಹಾಗೂ ಕಾಲೇಜಿನ ಬೀಗ ಮುರಿದು ಕೆಲವು ದಿನಗಳ ಹಿಂದೆ ಕಳ್ಳತನ ನಡೆದಿತ್ತು. ಈ ಕಳ್ಳತನ ಈತ ಹಾಗೂ ಫಯಾನ್‌ ಎಂಬಾತ ನಡೆಸಿದ್ದರು.
ಕಡಬ ಎಸ್‌.ಐ. ರುಕ್ಮ ನೇತೃತ್ವದ ತಂಡ ಬಂಧಿತನಿಂದ ಕಳ್ಳತನ ಮಾಡಲು ಬಳಕೆ ಮಾಡಿದ್ದ ರಾಡ್‌ ಸಹಿತವಾಗಿ ಕೆಲವು ಸಾಮಾಗ್ರಿಗಳನ್ನು ವಶ ಪಡೆಸಿಕೊಂಡಿದ್ದಾರೆ.
ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿ ಆತೂರು ಬಸ್ ನಿಲ್ದಾಣದಲ್ಲಿ ಸೆರೆ ಸಿಕ್ಕಿದ್ದಾನೆ. ಈತನ ಮೇಲೆ ಕಡಬ ಸೇರಿದಂತೆ ವಿವಿಧ ಠಾಣೆಯಲ್ಲಿ ಒಟ್ಟು 16 ಪ್ರಕರಣ ದಾಖಲಾಗಿವೆ. ಈ ಸರಣಿ ಕಳ್ಳತನದಲ್ಲಿ ಈತ ಹಾಗೂ ಇನ್ನೋರ್ವ ಫಯಾನ್ ಎಂಬಾತ ಪಾಲ್ಗೊಂಡಿದ್ದು, ಫಯಾನ್ ನನ್ನು ಈಗಾಗಲೇ ಮಂಗಳೂರಿನ ಕೊಣಾಜೆ ಠಾಣೆಯ ಪೋಲಿಸರು ಬಂಧಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button