ಅನ್ಸಾರ್ ವತಿಯಿಂದ ಪ್ರತಿಭಾ ಪುರಸ್ಕಾರ…

ಸುಳ್ಯ: 2022-23 ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಗಾಂಧೀನಗರ ಇದರ ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಯಿತು.

ಅಧ್ಯಕ್ಷತೆ ಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ ವಹಿಸಿದ್ದರು.ಪ್ರತಿಭಾ ಪುರಸ್ಕಾರವನ್ನು ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ಮತ್ತು ಮಾಜಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ ನೆರವೇರಿಸಿದರು. ಎಸ್. ಎಸ್. ಎಲ್. ಸಿ ಯಲ್ಲಿ 608 ಅಂಕ ಗಳಿಸಿದ ಸುಳ್ಯ ಸೈoಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿನಿ ಆಯಿಷಾ ಪ್ರಥಮ ಸ್ಥಾನಿಯಾದರೆ,ಕೆ. ಪಿ. ಎಸ್ ಬೆಳ್ಳಾರೆ ಯ ವಿದ್ಯಾರ್ಥಿನಿ ಶಿಬಾ 603 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡಕೊಂಡರು. ಪಿಯುಸಿ ವಿಜ್ಞಾನ ವಿಭಾಗದಲ್ಲಿ ನೆಹರು ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿ ಕು.ಸೌಧ 570 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದರೆ, ಅದೇ ಕಾಲೇಜಿನ ನಝತ್ ದ್ವಿತೀಯ ಸ್ಥಾನಿಯದರು. ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಅಮರ ಜ್ಯೋತಿ ಪಿ. ಯು ಕಾಲೇಜಿನ 590 ಅಂಕ ಗಳಿಸಿದ ಆಯಿಷತ್ ಶಿಫಾನ ಪ್ರಥಮವಾದರೆ, ರಫಾಶ್ ಶೇಖ್ 584 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರು. ಪಿಯುಸಿ ಕಲಾ ವಿಭಾಗದಲ್ಲಿ ಶಾರದಾ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಾದ ಮುನಿಷ್ ಮತ್ತು ಆಜ್ಮಿಯಾ ಕ್ರಮವಾಗಿ 548 ಮತ್ತು 532 ಅಂಕಪಡೆದು ಸನ್ಮಾನಕ್ಕೆ ಬಾಜನರಾದರು. ವೇದಿಕೆಯಲ್ಲಿ ಅನ್ಸಾರಿಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್ ಜನತಾ, ಅನ್ಸಾರ್ ಕಾರ್ಯದರ್ಶಿಗಳಾದ ಬಿ. ಎಂ. ಹನೀಫ್, ಸಂಶುದ್ದೀನ್ ಕೆ. ಬಿ., ಹಾಜಿ ಅಬ್ದುಲ್ ಖಾದರ್ ಪಾರೆ, ಯಾಕೂಬ್ ಹಾಜಿ ಸುಳ್ಯ ಟ್ರೇಡರ್ಸ್,ಉಪಾಧ್ಯಕ್ಷ ಖಜಾಂಚಿ ಎಸ್. ಪಿ. ಅಬೂಬಕ್ಕರ್, ನಿರ್ದೇಶಕರುಗಳಾದ ಎಸ್. ಎಂ. ಅಬ್ದುಲ್ ಹಮೀದ್,ಕೆ. ಬಿ. ಇಬ್ರಾಹಿಂ, ಸಿದ್ದೀಕ್ ಕಟ್ಟೆಕ್ಕಾರ್ಸ್, ಸಿದ್ದೀಕ್ ನಾವೂರು, ಅಬ್ದುಲ್ ರಝಕ್ ಕರಾವಳಿ,ನೌಷಾದ್ ಕೆರೆಮೂಲೆ,ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್, ಜಮಾಅತ್ ಉಪಾಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ ಕೆಎಂಎಸ್,ಪ್ರದಾನ ಕಾರ್ಯದರ್ಶಿ ಹಾಜಿ ಐ. ಇಸ್ಮಾಯಿಲ್, ಖಜಾಂಚಿ ಮುಹಿಯದ್ದೀನ್ ಫ್ಯಾನ್ಸಿ ಗಾಂಧಿನಗರ ಮುದರ್ರಿಸ್ ಇರ್ಫಾನ್ ಸಖಾಫಿ, ಸದರ್ ಉಸ್ತಾದ್ ಇಬ್ರಾಹಿಂ ಸಖಾಫಿ ಪುಂಡೂರ್,ಸಹಾಯಕ ಸದರ್ ಉಸ್ತಾದ್ ಅಬ್ದುಲ್ ಖಾದರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button