ಲಯನ್ಸ್ ಕ್ಲಬ್ ಮಾಣಿ ವತಿಯಿಂದ ಗುರು ವಂದನಾ ಕಾರ್ಯಕ್ರಮ…….

ಬಂಟ್ವಾಳ:ಲಯನ್ಸ್ ಕ್ಲಬ್ ಮಾಣಿ ವತಿಯಿಂದ ಮಾಣಿ ವಿನಾಯಕ ಕಾಂಪ್ಲೆಕ್ಸ್‍ನಲ್ಲಿ ಜರಗಿದ ಗುರು ವಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ವಿಜೇತರಾದ ದೊಡ್ಡ ಕೆಂಪಯ್ಯ, ತ್ರಿವೇಣಿ,ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕರಾದ ಭಾಸ್ಕರ ನಾಯ್ಕರನ್ನು ಸನ್ಮಾನಿಸಲಾಯಿತು. ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರಹ್ಲಾದ ಶೆಟ್ಟಿ ಅಭಿನಂಧನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ ಸಂಯೋಜಕ ಜಗದೀಶ ಎಡಪಡಿತ್ತಾಯ, ಬಂಟ್ವಾಳ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮಾತನಾಡಿದರು. ಬಾಲಕೃಷ್ಣ ಆಳ್ವ ಕೊಡಾಜೆ ಅಭಿಲಾಷ್ ರತ್ನಾಕರ ರೈ ಸನ್ಮಾನಿತರ ಸಾಧನೆ ಪರಿಚಯವನ್ನು ನಡೆಸಿಕೊಟ್ಟರು. ಕೋಶಾಧಿಕಾರಿ ನವೀತ್ ಶೆಟ್ಟಿ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಜಯರಾಮ ಕುಲಾಲ್ ರವರನ್ನು ಅಭಿನಂದಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಸ್ವಾಗತಿಸಿದರು. ಮೆಲ್ವಿನ್ ಮಾರ್ಟಿಸ್ ಪ್ರಾರ್ಥನೆ ನೆರವೇರಿಸಿ ಡಾ. ಮನೋಹರ ರೈ ದ್ವಜ ವಂದನೆ ಮಾಡಿದರು. ಕಾರ್ಯದರ್ಶಿ ಉಮೇಶ್ ಬರಿಮಾರು ಮಾಸಿಕ ವರದಿ ವಾಚಿಸಿದರು. ನಾರಾಯಣ ಸಾಲ್ಯಾನ್ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button