ಧರ್ಮಸ್ಥಳದಲ್ಲಿ‌ ನಂದಾದೀಪ ಆರಿದ ವದಂತಿ – ಬೆದರಿದ ಜನತೆಗೆ ಧರ್ಮಾಧಿಕಾರಿಗಳಿಂದ ಸ್ಪಷ್ಟನೆ…

ಬೆಳ್ತಂಗಡಿ :ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ನಂದಾದೀಪ ನಂದಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದು, ಅಂತಹ ಅಪಪ್ರಚಾರದ ಮಾತುಗಳಿಗೆ ಯಾರೂ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.

ದೇಗುಲದ ಬಾಗಿಲು ರಾತ್ರಿ 8 ಗಂಟೆಗೆ ಹಾಕಲಾಗುತ್ತದೆ. ಬೆಳಗ್ಗೆ ಐದು ಗಂಟೆಗೆ ಬಾಗಿಲು ತೆರೆಯುತ್ತಾರೆ, ಮಧ್ಯದಲ್ಲಿ ಯಾರು ಪ್ರವೇಶ ಮಾಡುವುದಿಲ್ಲ. ನಂತರ ಪ್ರವೇಶ ಮಾಡಿದವರು ಯಾರು? ನಂದಾದೀಪ ನಂದಿ ಹೋಗಿದನ್ನು ನೋಡಿದ್ದು ಯಾರು? ಇದು ಭಕ್ತರ ಭಾವನೆ, ನಂಬಿಕೆ ಜೊತೆ ಕಿಡಿಗೇಡಿಗಳು ಮಾಡಿದ ಸುಳ್ಳು ವದಂತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಮಂಜುನಾಥನ ಸನ್ನಿಧಿ ಧರ್ಮಸ್ಥಳದಲ್ಲಿ ದೀಪ ಆರಿದೆ. ಇದರಿಂದ ನಾಡಿಗೆ ಕಂಟಕ ಕಾದಿದೆ ಎಂಬ ವದಂತಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಈ ಪೋಸ್ಟ್ ಗೆ ರಾಜ್ಯದ ಜನ ಬೆದರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button