ವಿಕಲಚೇತನ ಮಕ್ಕಳಿಗೆ ಪ್ರೋತ್ಸಾಹಕ ಧನಸಹಾಯ ವಿತರಣೆ……

ಬಂಟ್ವಾಳ:ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಇದರ ವತಿಯಿಂದ ವಿಕಲಚೇತನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸಂಘದ ದಾನ ನಿಧಿಯಿಂದ ಕೊಡಲ್ಪಡುವ ಪ್ರೋತ್ಸಾಹಕ ಧನಸಹಾಯವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ ,ವೀರಕಂಬ, ಇಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಹಾಲಕ್ಷ್ಮಿ ಹಾಗೂ ಉಮ್ಮರ್ ಫಾರೂಕ್ ಇವರಿಗೆ ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಕಲ್ಲಡ್ಕ ನೀಡಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ರೈತರ ಸೇವಾ ಸಂಘ ಇದರ ನಿರ್ದೇಶಕರಾದ ಗಿರಿಯಪ್ಪಗೌಡ ಕೆಲಿಂಜ , ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್ ಕೆ ,ವೀರಕಂಭ ಶಾಖಾ ವ್ಯವಸ್ಥಾಪಕ ರಾದ ವನಿತ, ಶಾಲಾ ಮುಖ್ಯ ಶಿಕ್ಷಕಿ ಶಕುಂತಳಾ ಕೆ, ಸಹ ಶಿಕ್ಷಕರಾದ ತಿಮ್ಮಪ್ಪ ನಾಯ್ಕ, ರವೀಂದ್ರ ಕೆ, ಮಂಜುಳಾ, ಶಾರದಾ, ಮಕ್ಕಳ ಪೋಷಕರಾದ ಮಮತಾ ನಾಗೇಶ್ ಶೆಟ್ಟಿ, ಅಬ್ದುಲ್ ರಹಿಮಾನ್ ಸೈನಾಜ್, ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button