ಸಿಎಎ ಪರ ಹೇಳಿಕೆ ನೀಡಿದ ಬಿಜೆಪಿ ಮುಖಂಡ ಮಹಮ್ಮದ್ ಅಸ್ಗರ್‌ಗೆ ಜೀವ ಬೆದರಿಕೆ….

ಮಂಗಳೂರು : ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಯಿಂದಾಗಿ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಮಹಮ್ಮದ್ ಅಸ್ಗರ್‌‌ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ವಿದೇಶದಿಂದ ಓರ್ವ ವ್ಯಕ್ತಿ ಕರೆ ಮಾಡಿ, ನೀನು ಮುಸ್ಲಿಮನಾಗಿದ್ದು ಈ ರೀತಿ ಮಾತಾನಾಡಿದ್ದು ಸರಿಯಲ್ಲ. ಬಿಜೆಪಿಯವರು ನಿನಗೂ ಕೂಡ ಭಾರತದಲ್ಲಿ ಇರಲು ಜಾಗ ನೀಡುವುದಿಲ್ಲ. ಹಾಗಿದ್ದರೂ ನೀನು ಬಿಜೆಪಿಯವರೊಂದಿಗೆ ಸೇರಿ ಮುಸ್ಲಿಮರಿಗೆ ವಿರುದ್ಧವಾಗಿ ಮಾತನಾಡುತ್ತಿರುವೆ. ದಕ್ಷಿಣ ಕನ್ನಡದಲ್ಲಿ ಈ ಬಗ್ಗೆ ಮಾತನಾಡಿದರೆ ನೀನು ಜೀವಂತ ಉಳಿಯಲ್ಲ. ಇದು ನಿನಗೆ ಕೊನೆಯ ಎಚ್ಚರಿಕೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ ಎಂದು ಅಸ್ಗರ್‌ ಅವರು ದೂರಿದ್ದಾರೆ.
ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಅಸ್ಗರ್‌ ಅವರು ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button