ಆದಿತ್ಯ ನಾರಾಯಣ – ಕಾಮರ್ಸ್ ನಲ್ಲಿ ರಾಜ್ಯಕ್ಕೇ ತೃತೀಯ ಸ್ಥಾನ…

ಪುತ್ತೂರು: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವಿವೇಕಾನಂದ ಪಿಯು ಕಾಲೇಜಿನ ಆದಿತ್ಯ ನಾರಾಯಣ ಪಿ ಎಸ್ 595 ಅಂಕಗಳನ್ನು ಪಡೆದು ರಾಜ್ಯಕ್ಕೇ ತೃತೀಯ ಸ್ಥಾನ ಗಳಿಸಿದ್ದಾರೆ.
ಇವರು ಪುತ್ತೂರಿನ ಪಡೀಲ್ ವಿಜಯನಗರದ ನಿವಾಸಿ ಇಂಜಿನಿಯರ್ ಕೆ ಶಂಕರ ಭಟ್ ಮತ್ತು ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಕೆ. ದೇವಕಿ ಅವರ ಪುತ್ರ. ಆದಿತ್ಯ ನಾರಾಯಣ ಅವರು ಭವಿಷ್ಯದಲ್ಲಿ ಬಿಕಾಂ ಮತ್ತು ಸಿಎ ಮಾಡುವ ಗುರಿ ಹೊಂದಿದ್ದಾರೆ

Sponsors

Related Articles

Back to top button