ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗಕ್ಕೆ ಕರ್ನಾಟಕ ಇನ್ನೋವೇಶನ್ ಅವಾರ್ಡ್ – 2022 …

ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ ಎಂ ರವರಿಗೆ ಕರ್ನಾಟಕ ಸರ್ಕಾದರ ವತಿಯಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕೊಡುವ 2022 ರ, ಕರ್ನಾಟಕ ಇನ್ನೋವೇಶನ್ ಅವಾರ್ಡ್ – 2022 ಲಭಿಸಿರುತ್ತದೆ.
ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಮಾ. 7 ರಂದು ನಡೆದ ರಾಷ್ಟ್ರೀಯ ವಿಜ್ಞಾನದ ದಿನದಂದು ಪದ್ಮಶ್ರೀ ಪ್ರೊ. ಎಂ.ಆರ್. ಎಸ್. ರಾವ್ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಪದ್ಮಶ್ರೀ ಪ್ರೊ. ಅಯ್ಯಪ್ಪನ್ ನೀಡಿ ಗೌರವಿಸಿದರು.
ಈ ಪ್ರಶಸ್ತಿಯು ಹತ್ತು ಸಾವಿರ ನಗದು ಒಳಗೊಡಿರುತ್ತದೆ. ಡಾ ಪ್ರವೀಣ್ ಅವರು ಅಭಿವೃದ್ಧಿ ಪಡಿಸಿರುವ ಹೈಡ್ರೋಜನ್ ಜನರೇಶನ್ ಮತ್ತು ತ್ಯಾಜ್ಯ ನೀರನ್ನು ಶುದ್ಧೀಕರಿಸುವ ತಂತ್ರಜ್ಞಾನಕ್ಕೆ ಈ ಪ್ರಶಸ್ತಿ ಲಭಿಸಿದೆ. ಡಾ. ಪ್ರವೀಣ್ ಅವರು ಈ ತಂತ್ರಜ್ಞಾನದಲ್ಲಿ ಕೆಲವು ನ್ಯಾನೊ ಪದಾರ್ಥಗಳನ್ನು ಕಂಡು ಹಿಡಿದು ಈ ಪದಾರ್ಥಗಳು ಹೆಚ್ಚು ಹೈಡ್ರೋಜನ್ ಕೊಡುತ್ತದೆ ಮತ್ತು ಮಾಲಿನ್ಯವಾದ ನೀರನ್ನು ಅತೀ ಕಡಿಮೆ ಅವಧಿಯಲ್ಲಿ ಶುದ್ಧೀಕರಿಸುತ್ತದೆ ಎಂದು ಅನ್ವೇಷಿಸಿದ್ದರು. ಇವರ ಈ ಸಂಶೋಧನೆಯ ಒಂದು ಭಾಗವು ಪ್ರತಿಷ್ಠಿತ ನೇಜರ್ ನಿಯತಾಕಾಲಿಕೆಯಲ್ಲಿ ಪ್ರಕಟವಾಗಿರುತ್ತದೆ.
ಈ ಸಾಧನೆಗೆ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿಎ. ಎ. ರಾಘವೇಂದ್ರ ರಾವ್ ಮತ್ತು ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.

img 20230312 wa0013
ಡಾ. ಪ್ರವೀಣ್ ಬಿ ಎಂ
Sponsors

Related Articles

Back to top button