ಸಹ್ಯಾದ್ರಿಯಲ್ಲಿ ಏರೋಫಿಲಿಯಾ 2019 ಸಮಾರೋಪ ಸಮಾರಂಭ…..

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಲ್ಲಿ ನಡೆದ 2 ದಿನಗಳ ರಾಷ್ಟ್ರೀಯ ಮಟ್ಟದ ಏರೋಮೋಡೆಲಿಂಗ್ ಕಾರ್ಯಕ್ರಮ ಏರೋಫಿಲಿಯಾ 2019 ಇದರ ಸಮಾರೋಪ ಸಮಾರಂಭ ಸೆ.21 ರಂದು ನಡೆಯಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿ ನಿವೃತ್ತ ಕಮ್ಯಾಂಡರ್ ನಾರಾಯಣನ್ ಮಾತನಾಡಿ, “ಭಾರತದಲ್ಲಿ ಈ ರೀತಿಯ ಏರೋಮೋಡೆಲಿಂಗ್ ಕಾರ್ಯಕ್ರಮಗಳನ್ನು ನಡೆಸುವ ತಾಂತ್ರಿಕ ಕಾಲೇಜುಗಳು ಬಹಳ ಕಡಿಮೆ. ಏರೋಫಿಲಿಯಾ ಕಳೆದ 2 ವರ್ಷಗಳಿಂದ ಅತ್ಯುತ್ತಮವಾಗಿ ಬೆಳೆಯುತ್ತಿದೆ ಮತ್ತು ಭಾಗವಹಿಸುವವರ ನಡುವಿನ ಸ್ಪರ್ಧೆಯ ಗುಣಮಟ್ಟವೂ ಹೆಚ್ಚಾಗಿದೆ. ಈ ಕಾರ್ಯಕ್ರಮವು ಇಸ್ರೋ ಮತ್ತು ಏರೋಸ್ಪೇಸ್ ನಲ್ಲಿರುವ ಇತರ ತಂಡಗಳೊಂದಿಗೆ ಸಂವಹನ ನಡೆಸಲು ಅವಕಾಶವನ್ನು ನೀಡಿದೆ ಎಂದರು.
ಭಂಡಾರಿ ಫೌಂಡೇಶನ್ ಟ್ರಸ್ಟಿ ಶ್ರೀ ದೇವದಾಸ್ ಹೆಗ್ಡೆ, ಪ್ರಾಂಶುಪಾಲರಾದ ಡಾ. ಆರ್. ಶ್ರೀನಿವಾಸ ರಾವ್ ಕುಂಟೆ, ಉಪ-ಪ್ರಾಂಶುಪಾಲ ಪ್ರೊ. ಎಸ್ ಎಸ್ ಬಾಲಕೃಷ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button