ಸಹ್ಯಾದ್ರಿ ಕಾಲೇಜಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಭೇಟಿ….

ಮಂಗಳೂರು:ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಜ್ ಕಿರಣ್ ರೈ ಸಹ್ಯಾದ್ರಿ ಕ್ಯಾಂಪಸ್ ಗೆ ಭೇಟಿ ನೀಡಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಧ್ಯಕ್ಷರಾದ ಡಾ.ಮಂಜುನಾಥ ಭಂಡಾರಿ ಮಾತನಾಡಿ, ಅತ್ಯಂತ ಸ್ಪಷ್ಟತೆ, ಸಮರ್ಪಣೆ ಮತ್ತು ಬದ್ಧತೆಯೊಂದಿಗೆ ಯೋಜಿಸಿದಂತೆ ಗುರಿಯನ್ನು ಸಾಧಿಸಿದ ರಾಜ್ ಕಿರಣ್ ರೈ ಅವರನ್ನು ಶ್ಲಾಘಿಸಿ, ಶ್ರೇಷ್ಠ ವ್ಯಕ್ತಿಗಳು ಸಹ್ಯಾದ್ರಿ ಕಾಲೇಜಿಗೆ ಅನಿರೀಕ್ಷಿತ ಭೇಟಿ ನೀಡಿ ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ ಕಿರಣ್ ರೈ ಅವರು, ಉತ್ಸಾಹ, ನಮ್ರತೆ ಮತ್ತು ನಿರಂತರ ಕಲಿಕೆ ಒಬ್ಬ ನಾಯಕನ ಪ್ರಮುಖ ಅಂಶಗಳು. ಸಕಾರಾತ್ಮಕ ನಡವಳಿಕೆ ಮತ್ತು ಮಾಡಿದ ತಪ್ಪುಗಳನ್ನು ಹೇಗೆ ನಿವಾರಿಸುತ್ತೀರಿ ಎಂದು ಯೋಚಿಸಿ ಮುಂದಿನ ಕಾರ್ಯ ಯೋಜನೆ ಮಾಡಬೇಕು.
ಯೂನಿಯನ್ ಬ್ಯಾಂಕಿನ ನಂಜುಂಡಪ್ಪ ಮತ್ತು ಶ್ರೀ ಜೋಶಿ ಮತ್ತು ರವೀಂದ್ರನಾಥಶೆಟ್ಟಿ ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button